ಬಿಲ್ ಕಲೆಕ್ಟರ್​ಗೆ ಗ್ರಾಮಸ್ಥರ ಕ್ಲಾಸ್

ಶುಕ್ರವಾರ, 19 ಮೇ 2023 (13:50 IST)
ಜನರು  ಕರೆಂಟ್ ಬಿಲ್ ಕಾಂಗ್ರೆಸ್​ನವರನ್ನೆ ಕೇಳಿ ಎನ್ನುತ್ತಿದ್ದಾರೆ. ಕಾಂಗ್ರೆಸ್​ಗೆ ಬಹುಮತ ಸಿಕ್ಕ ಹಿನ್ನೆಲೆ ವಿದ್ಯುತ್ ಬಿಲ್ ಪಾವತಿ ಮಾಡಲ್ಲ ಎಂದು ಜನರು ಹೇಳುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಜಮಾಪುರ ಗ್ರಾಮದಲ್ಲಿ ಜನರು ಬಿಲ್​ ಪಾವತಿ ಮಾಡಿಸಿಕೊಳ್ಳಲು ಬಂದ ಕೆಇಬಿ ಬಿಲ್ ಕಲೆಕ್ಟರ್​ನನ್ನೇ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಬಂದಿದೆ ಅವರ ಬಳಿಯೆ ಬಿಲ್ ತಗೆದುಕೋ ನಾವು ಬಿಲ್ ಕಟ್ಟಲ್ಲ. ಬೇಕಾದರೆ ನಿನ್ನ ಆಫೀಸರ್​ ಬಳಿ ಹೋಗಿ ಹೇಳು” ಎಂದು ಜನರು ಹೇಳುತ್ತಿದ್ದು “ಗ್ರಾಮದಲ್ಲಿ ಯಾರ ಮನೆಗೂ ಹೋಗಿ ಬಿಲ್ ಕೇಳಬೇಡ. ಕಮರ್ಷಿಯಲ್ ಮೀಟರ್ ಗೆ ಮಾತ್ರ ಬಿಲ್ ಕೇಳು ಮನೆಗಳ ತಂಟೆಗೆ ಬರಬೇಡ” ಎಂದು ಬಿಲ್ ಕಲೆಕ್ಟರ್​ಗೆ ಜನರು ಕ್ಲಾಸ್ ಕೂಡ ತಗೆದುಕೊಂಡಿದ್ದಾರೆ. ಇಷ್ಟು ನಡೆದು ಬಿಲ್ ಕಲೆಕ್ಟರ್​ರನ್ನು ಗ್ರಾಮದಿಂದ ಗ್ರಾಮಸ್ಥರು ಹೊರ ಕಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ