‘ಮೈಸೂರು ಮಿನರಲ್ಸ್ ನಲ್ಲಿ 2000ಕೋಟಿ ರೂ. ಅಕ್ರಮ-ಹೆಚ್.ಡಿ.ಕುಮಾರಸ್ವಾಮಿ

ಶನಿವಾರ, 13 ಜನವರಿ 2018 (12:37 IST)
ಬೆಂಗಳೂರು : ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ‘ಮೈಸೂರು ಮಿನರಲ್ಸ್ ನಲ್ಲಿ 2000ಕೋಟಿ ರೂ. ಅಕ್ರಮ ನಡೆದಿದೆ’ ಎಂದು ಬೆಂಗಳೂರಿನಲ್ಲಿ  ಗಂಭೀರವಾದ ಆರೋಪ ಮಾಡಿದ್ದಾರೆ.

 
ಸುದ್ಧಿಗೋಷ್ಠಿಯೊದರಲ್ಲಿ ಗಣಿಗಾರಿಕೆಗೆ ಸಂಬಂಧಪಟ್ಟಂತೆ ಮಾತನಾಡಿದ್ದ ಅವರು ‘ಟೆಂಡರ್ ಅಗ್ರಿಮೆಂಟ್ ಮುನ್ನವೇ ಗಣಿಗಾರಿಕೆ ಶುರುವಾಗಿದೆ. ತುಷಾರ್ ಗಿರಿನಾಥ್ ಅವಧಿಯಲ್ಲೇ ಭಾರಿ ಅಕ್ರಮ ನಡೆದಿತ್ತು. ವಿನಯ್ ಕುಲಕರ್ಣಿ ಅವರನ್ನು ಗಣಿ ಮಂತ್ರಿ ಅಂತ ಮಾಡಿದ್ದಾರೆ. ಗಣಿ ವ್ಯವಹಾರ ನಡೆಯುತ್ತಿರೋದೇ ಸಿಎಂ ಕಚೇರಿಯಿಂದ. 3 ವರ್ಷಗಳಲ್ಲಿ 8 ಜನ ಅಧಿಕಾರಿಗಳು ಎತ್ತಂಗಡಿಯಾಗಿದೆ’ ಎಂದು ಬೆಂಗಳೂರಿನಲ್ಲಿ ಶನಿವಾರ(ಇಂದು) ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ