Mangaluru: ದಕ್ಷಿಣ ಕನ್ನಡ ಜಿಲ್ಲೆಯಿಂದ 21 ಹಿಂದೂ ನಾಯಕರು, 15 ಮುಸ್ಲಿಂ ನಾಯಕರು ಗಡೀಪಾರು

Krishnaveni K

ಮಂಗಳವಾರ, 3 ಜೂನ್ 2025 (09:12 IST)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿರುವ ಆರೋಪದಲ್ಲಿ 21 ಹಿಂದೂ ನಾಯಕರನ್ನು ಮತ್ತು 15 ಮುಸ್ಲಿಂ ನಾಯಕರನ್ನು ಗಡೀಪಾರು ಮಾಡಲು ಸರ್ಕಾರ ನೋಟಿಸ್ ನೀಡಿದೆ. ಆದರೆ ಇದಕ್ಕೀಗ ಭಾರೀ ಆಕ್ರೋಶ ವ್ಯಕ್ತವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬೆಳ್ಳಾರೆ, ಪುತ್ತೂರು ಸೇರಿದಂತೆ ವಿವಿಧ ಭಾಗದ ಹಲವು ಹಿಂದೂ ನಾಯಕರಿಗೆ ಗಡೀಪಾರು ನೋಟಿಸ್ ನೀಡಲಾಗಿದೆ. ಇವರಲ್ಲಿ ಈ ಹಿಂದೆ ಲೋಕಸಭೆಗೆ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ, ಹಿಂದೂ ಸಂಘಟನೆ ನಾಯಕ ಭರತ್ ಕುಮ್ಟೇಲು ಸೇರಿದ್ದಾರೆ.

ಇನ್ನು ಮುಸ್ಲಿಮ್ ನಾಯಕರಿಗೂ ಸರ್ಕಾರ ನೋಟಿಸ್ ನೀಡಿದೆ. ಆದರೆ ಹಿಂದೂ ನಾಯಕರಿಗೆ ಹೋಲಿಸಿದರೆ ಮುಸ್ಲಿಂ ನಾಯಕರ ಸಂಖ್ಯೆ ಕಡಿಮೆ. ಇದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಬೇಕೆಂದೇ ಸರ್ಕಾರ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇನ್ನು ಗಡೀಪಾರು ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿರುವ ಅರುಣ್ ಕುಮಾರ್ ಪುತ್ತಿಲ, ಯಾವುದೇ ಕಾರಣಕ್ಕೂ ನೋಟಿಸ್ ಸ್ವೀಕರಿಸಲ್ಲ. ಸರ್ಕಾರ ಹಿಂದೂಗಳನ್ನೇ ಟಾರ್ಗೆಟ್ ಮಾಡುತ್ತಿದೆ ಎಂಬುದಕ್ಕೆ ಇದು ಸಾಕ್ಷಿ. ನಾವು ಯಾವುದೇ ಕೊಲೆ, ದರೋಡೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಹೀಗಿರುವಾಗ ಗಡೀಪಾರು ಯಾಕೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ