Bantwal Murder: ಸತ್ತ ಮುಸ್ಲಿಂ ಯುವಕ ಅಮಾಯಕ, ಭಗವದ್ಗೀತೆಯಲ್ಲಿ ಕೊಲ್ಲಲು ಹೇಳ್ತಾರಾ: ದಿನೇಶ್ ಗುಂಡೂರಾವ್

Krishnaveni K

ಗುರುವಾರ, 29 ಮೇ 2025 (12:23 IST)
ಮಂಗಳೂರು: ಬಂಟ್ವಾಳದಲ್ಲಿ ಮುಸ್ಲಿಂ ಯುವಕ ಸಾವನ್ನಪ್ಪಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ದಿನೇಶ್ ಗುಂಡೂರಾವ್ ಸತ್ತ ಮುಸ್ಲಿಂ ಯುವಕ, ಅವನನ್ನು ಕೊಲ್ಲಲು ಹಿಂದೂ ಧರ್ಮ ಹೇಳ್ತದಾ, ಭಗವದ್ಗೀತೆ ಹೇಳ್ತದಾ ಎಂದು ಪ್ರಶ್ನೆ ಮಾಡಿದ್ದಾರೆ.
 

ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಎನ್ನುವ ಯುವಕನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಇದರಿಂದ ಮಂಗಳೂರಿನಲ್ಲಿ ಮತ್ತೆ ಪ್ರಕ್ಷುಬ್ಧ ವಾತಾವರಣವಿದೆ. ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರವಾಗಿ ಈ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಇದೀಗ ಪ್ರಕರಣದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ‘ಸತ್ತವನಿಗೆ ಕ್ರಿಮಿನಲ್ ಹಿನ್ನಲೆಯಿರಲಿಲ್ಲ. ಅವನು ಅಮಾಯಕ. ಒಂದೇ ಒಂದು ಕೇಸ್ ಇರಲಿಲ್ಲ. ಆದರೂ ಅವನನ್ನು ಸಾಯಿಸಲಾಗಿದೆ.

ಯಾವ ಧರ್ಮದಲ್ಲಿ ಹೇಳ್ತದೆ ಕೊಲೆ ಮಾಡಲು? ಹಿಂದೂ ಧರ್ಮದಲ್ಲಿ ಹೇಳ್ತದಾ? ಭಗವದ್ಗೀತೆಯಲ್ಲಿ ಹೇಳ್ತದಾ? ರಾಮಾಯಣದಲ್ಲಿ ಹೇಳ್ತದಾ? ಹೇಳಿ.. ಹೀಗಾಗಿ ನಾವು ಇಂದು ಜನರಲ್ಲಿ ಕೋಮು ಸಾಮರಸ್ಯ ಕಾಪಾಡಲು ಕ್ರಮ ಕೈಗೊಳ್ಳಬೇಕಿದೆ. ಜನರಲ್ಲಿ ಸೌಹಾರ್ದತೆ ಬೆಳೆಸಬೇಕಿದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ