ಮತಗಟ್ಟೆಗೆ ನುಗ್ಗಿ ನಿವೃತ್ತ ಅಧಿಕಾರಿಯಿಂದ ಗಲಾಟೆ

ಗುರುವಾರ, 11 ಮೇ 2023 (10:05 IST)
ಯಾದಗಿರಿ : ಜಿಲ್ಲೆಯ ಕೆಂಬಾವಿ ಹಾಗೂ ಸುರಪುರ ಪಟ್ಟಣದಲ್ಲಿ 144 ಸೆಕ್ಷನ್ ಜಾರಿ ಮಾಡಿ ಮಾಡಿ ಎಸ್ಪಿ ಡಾ.ಬಿ.ಸಿ ವೇದಮೂರ್ತಿ ಆದೇಶ ಹೊರಡಿಸಿದ್ದಾರೆ.
 
ಮತದಾನದ ವೇಳೆ ಮತಗಟ್ಟೆ ಒಳಗೆ ನಿವೃತ್ತ ಎಎಸ್ಐ ಮೇಘನಾಥ್ ನುಗ್ಗಿ ಗಲಾಟೆ ಮಾಡಿದ ಹಿನ್ನೆಲೆಯಲ್ಲಿ ಈ ಆದೇಶ ಜಾರಿ ಮಾಡಲಾಗಿದೆ. ನಿವೃತ್ತ ಅಧಿಕಾರಿ ಚುನಾವಣಾ ಸಿಬ್ಬಂದಿಯೊಂದಿಗೆ ವಾಗ್ವಾದ ಮಾಡಿದ್ದು, ತಳ್ಳಿ ಏಕವಚನದಲ್ಲೇ ರೇಗಿ ಹಲ್ಲೆಗೆ ಮುಂದಾಗಿದ್ದಾನೆ.

ನನ್ನ ವಾಚ್ನಲ್ಲಿ ಇನ್ನೂ 6 ಗಂಟೆ ಆಗಿಲ್ಲ, ಗಂಟೆ ಆದಾಗ ಬರುತ್ತೇನೆ. ನಿನಗೆ ಮತದ ಬೆಲೆ ಗೊತ್ತಿಲ್ಲ ಎಂದು ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾನೆ. ಕೊನೆಗೂ ಮತ ಹಾಕದೇ ತೆರಳಿದ್ದಾನೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ