ಎಣ್ಣೆ ಗುಂಗಲ್ಲಿ ಕಾರ್ ಗಳಿಗೆ ಬೆಂಕಿ ಹಚ್ಚಿದವನಿಗೆ ಹಿಗ್ಗಾಮುಗ್ಗಾ ಥಳಿತ

ಗುರುವಾರ, 30 ಜನವರಿ 2020 (18:40 IST)

ಕುಡಿತದ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಹೈಟೆಕ್ ಕಾರುಗಳಿಗೆ ಬೆಂಕಿ ಹಚ್ಚಿರೋ ಘಟನೆ ನಡೆದಿದೆ.
 

ಎಣ್ಣೆ ಗುಂಗಿನಲ್ಲಿದ್ದ ಆರೋಪಿ ಬೆಂಗಳೂರಿನ ಮಂಜುನಾಥ ನಗರದ ರಾಜೇಂದ್ರ ಪ್ರಸಾದ್ (47) ಎಂಬಾತ ಮನೆಗಳ ಮುಂದಿದ್ದ ಐಶಾರಾಮಿ ಕಾರುಗಳಿಗೆ ನಡುರಾತ್ರಿ ಬೆಂಕಿ ಇಟ್ಟಿದ್ದಾನೆ.

ಕಾರಿಗೆ ಬೆಂಕಿ ಹಚ್ಚಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ವಲ್ಪ ಹೊತ್ತಿನ ಬಳಿಕ ಘಟನಾ ಸ್ಥಳಕ್ಕೆ ಬಂದ ಆರೋಪಿ, ಕಾರು ಹೇಗೆ ಸುಟ್ಟಿವೆ ಅಂತ ಪೊಲೀಸರಿಗೆ ಪ್ರಶ್ನೆ ಮಾಡಿದ್ದಾನೆ. ಆಗ ಸಿಸಿಟಿವಿಯಲ್ಲಿ ಆರೋಪಿಯನ್ನು ನೋಡಿದ್ದ ಜನರು ಆತನನ್ನು ನೋಡಿದ್ದ ತಡ, ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ