ಇಂದೇ ರೈತರ ಖಾತೆಗಳಿಗೆ ಬರ ಪರಿಹಾರದ ಹಣ.. ಸಿಎಂ ಟ್ವೀಟ್

ಮಂಗಳವಾರ, 14 ಮಾರ್ಚ್ 2017 (10:51 IST)
ಬೆಂಗಳೂರು(ಮಾ.14): ರಾಜ್ಯಾದ್ಯಂತ ಬರದಿಂದ ತತ್ತರಿಸಿರುವ ರೈತರ ಸಂಕಷ್ಟಕ್ಕೆ ಕೊನೆಗೂ ಸರ್ಕಾರ ಸ್ಪಂದಿಸಿದೆ. ಬರದಿಂದ ಕಂಗೆಟ್ಟಿರುವ ಲಕ್ಷ ಲಕ್ಷ ರೈತರಿಗೆ ಇಂದೇ ಬರ ಪರಿಹಾರದ ಹಣ ಸಿಗಲಿದೆ. ಈ ಬಗ್ಗೆ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆ  @CMofKarnataka   ಪ್ರಕಟಿಸಲಾಗಿದೆ.

ರಾಜ್ಯಾದ್ಯಂತ ಬರದಿಂದ ತತ್ತರಿಸಿರುವ ಮಿಲಿಯನ್ ಗಟ್ಟಲೆ ರೈತರ ಅಕೌಂಟಿಗೆ ಇಂದೇ ಬರ ಪರಿಹಾರದ ಹಣ 671 ಕೋಟಿ ರೂ. ಜಮೆಯಾಗಲಿದೆ ಎಂದು ಪ್ರಕಟಿಸಲಾಗಿದೆ.


A million farmers affected by drought will get input subsidy of Rs 671 crores directly into their bank accounts today.

— CM of Karnataka (@CMofKarnataka) March 14, 2017

ವೆಬ್ದುನಿಯಾವನ್ನು ಓದಿ