ಒಂದೇ ಹುಲಿ ಕಾಣಿಸ್ತು ಅಂತಾ ಟೀಕಿಸ್ತಾರೆ-ಮಾಜಿ ಸಚಿವ K.S. ಈಶ್ವರಪ್ಪ

ಸೋಮವಾರ, 10 ಏಪ್ರಿಲ್ 2023 (16:03 IST)
ಕಾಂಗ್ರೆಸ್​ನವರು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯನ್ನು ಕರೆಸಿ, ರಾಹುಲ್ ಗಾಂಧಿ ಮುಖ ತೋರಿಸಿ ಜನರ ಬಳಿ ವೋಟ್ ತೆಗೆದುಕೊಳ್ಳಿ ನೋಡೋಣ ಎಂದು ಮಾಜಿ ಸಚಿವ K.S. ಈಶ್ವರಪ್ಪ ಸವಾಲ್​ ಹಾಕಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಷ್ಟ್ರದ ಬಿಜೆಪಿ ನಾಯಕರು ಚುನಾವಣಾ ಸಂದರ್ಭದಲ್ಲಿ ರಾಜ್ಯಕ್ಕೆ ಬರುತ್ತಿರೋದೆ ಕಾಂಗ್ರೆಸ್​​ನವರಿಗೆ ತಳಮಳ ಶುರುವಾಗಿದೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ವಿಶ್ವ ನಾಯಕ ನರೇಂದ್ರ ಮೋದಿ ಅವರು ನಮ್ಮ ನಾಯಕರು ಆಗಿರೋದು ನಮ್ಮ ಹೆಮ್ಮೆ, ಬಿಜೆಪಿ ಸಂಘಟನೆ ಬೂತ್ ಮಟ್ಟದಲ್ಲಿ ಬೆಳೆದಿದೆ.. ಮಾಜಿ ಸಿಎಂ B.S. ಯಡಿಯೂರಪ್ಪ, ಸಿಎಂ ಬಸವರಾಜ್​​​ ಬೊಮ್ಮಾಯಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನ ಮೆಚ್ಚಿದ್ದಾರೆ.. ರಾಜ್ಯದಲ್ಲಿ ಬಿಜೆಪಿ ಈ ಬಾರಿ ಪೂರ್ಣ ಬಹುಮತ ಬರುವ ವಿಶ್ವಾಸ ಇದೆ ಎಂದು ತಿಳಿಸಿದ್ರು. ಇನ್ನು ಬಂಡೀಪುರದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಹುಲಿ ಕಾಣಲಿಲ್ಲ ಎಂಬ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಟೀಕೆ ಮಾಡೋದು ಬಿಟ್ಟರೆ ಕಾಂಗ್ರೆಸ್​ನವರಿಗೆ ಏನು ಗೊತ್ತಿದೆ ಹೇಳಿ. ಹುಲಿ‌ ಕಾಣಲಿಲ್ಲ ಅನ್ನೋದು ಒಂದು ಟೀಕೆ.. ಆಕಸ್ಮಾತ್ ಒಂದು ಹುಲಿ ಕಂಡ್ರೆ ಒಂದೇ ಕಾಣಿಸ್ತು ಅಂತಾ ಟೀಕೆ. ಟೀಕೆಯಲ್ಲೇ ಕಾಂಗ್ರೆಸ್​​ನವರು ಜೀವನ ಕಳೆದುಕೊಂಡು ಬಿಟ್ರು ಎಂದು ಲೇವಡಿ ಮಾಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ