ಕೊರೊನಾ ಟೆಸ್ಟ್ ಮಾಡಿಸೋದಿಲ್ಲ ಎಂದವನ ಕಥೆ ಫಿನಿಷ್

ಭಾನುವಾರ, 24 ಮೇ 2020 (20:31 IST)
ಕೊರೊನಾ ವೈರಸ್ ಟೆಸ್ಟ್ ಮಾಡಿಸಿಕೊಳ್ಳುವುದಿಲ್ಲ ಎಂದು ಹಠಹಿಡಿದ ಯುವಕನನ್ನು ಕೊಲೆ ಮಾಡಿದ ಅಮಾನವೀಯ ಘಟನೆ ನಡೆದಿದೆ.

ಮಂಜಿತ್ ಸಿಂಗ್ ಎಂಬಾತನೇ ಕೊಲೆಯಾದ ಯುವಕನಾಗಿದ್ದಾನೆ. ದೆಹಲಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜಿತ್ ಸಿಂಗ್ ತನ್ನ ಊರಾದ ಮಲ್ಕಾಪುರಕ್ಕೆ ಬಂದಿದ್ದನು.

ಅಲ್ಲಿದ್ದ ಸಂಬಂಧಿಕರು ಈತನಿಗೆ ಕೋವಿಡ್ -19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಆದರೆ ಮಂಜಿತ್ ಅದಕ್ಕೆ ಒಪ್ಪಿರಲಿಲ್ಲ.

ಹೀಗಾಗಿ ನಡೆದ ಗಲಾಟೆಯಲ್ಲಿ ಮಂಜಿತ್ ನನ್ನು ಥಳಿಸಿ ಕೊಲೆ ಮಾಡಲಾಗಿದೆ. ಈ ಕುರಿತು ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ