ಕುಡುಕ ಪತಿಯನ್ನು ಕೊಂದ ಪತ್ನಿ

ಗುರುವಾರ, 20 ಅಕ್ಟೋಬರ್ 2022 (19:03 IST)
ದೊಣ್ಣೆಯಿಂದ ಹಲ್ಲೆ ನಡೆಸಿ ಪತ್ನಿಯೇ ಪತಿಯನ್ನು ಹತ್ಯೆಗೈದಿರುವ ಘಟನೆ ಹಾಸನ‌ ಜಿಲ್ಲೆಯ ಅರಕಲಗೂಡು ತಾಲೂಕಿನ ನೇರಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೃಷ್ಣೇಗೌಡ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದು, ಲೀಲಾವತಿ ಎಂಬಾಕೆ ಈ ಕೃತ್ಯ ಎಸಗಿದ್ದಾಳೆ. ಪತಿ ಕೃಷ್ಣೇಗೌಡ ನಿತ್ಯ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದ ಈಗಾಗಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಮೃತಪಟ್ಟ ಪತಿಯನ್ನು ಪತ್ನಿ ಲೀಲಾವತಿ ಮನೆಯ ಹಿಂಭಾಗ ಗುಂಡಿತೆಗೆದು ಹೂತಿದ್ದಾರೆ. ಪತಿಯನ್ನು ಹತ್ಯೆಗೈದು ತನ್ನ ಪಾಡಿಗೆ ತಾನು ಮನೆಯಲ್ಲಿದ್ದ, ಲೀಲಾವತಿ ಕಂಡು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಈಗಾಗಿ ಕೃಷ್ಣೇಗೌಡ ಕಾಣೆಯಾಗಿರೋ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಜನರ ಅನುಮಾನದ ಮೇಲೆ ಪೊಲೀಸರು ಕರೆತಂದು ವಿಚಾರಣೆ ಮಾಡಿದಾಗ ಹತ್ಯೆ ಕೇಸ್ ಬಯಲಾಗಿದೆ. ಮಹಿಳೆಯನ್ನು ವಶಕ್ಕೆ ಪಡೆದು ಮೃತದೇಹ ಹೊರ ತೆಗೆಸೋ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ