ವಿವಾಹಿತ ಮಹಿಳೆಯೊಂದಿಗೆ ಓಡಿಹೋದ ಯುವಕ ; ತಾಯಿ-ಮಗ ಆತ್ಮಹತ್ಯೆ

ಭಾನುವಾರ, 8 ಮಾರ್ಚ್ 2020 (20:01 IST)

ಮೂರು ಮಕ್ಕಳ ತಾಯಿಯೊಬ್ಬಳ ಜೊತೆ ಯುವಕನೊಬ್ಬ ಪ್ರೀತಿಸಿ ಓಡಿಹೋಗಿದ್ದಕ್ಕಾಗಿ ಯುವಕನ ತಾಯಿ, ಸಹೋದರ ಆತ್ಮಹತ್ಯೆಗೆ ಶರಣಾಗಿದ್ದಾರೆ.
 

ಸುಬ್ಬಮ್ಮ ಹಾಗೂ ಆಕೆಯ ಮಗ ಸಿದ್ದರಾಜು ಸಾವಿಗೆ ಶರಣಾದವರು. ಚಾಮರಾಜನಗರದ ಗುಂಡ್ಲುಪೇಟೆಯ ಬೆಳಚವಾಡಿಯಲ್ಲಿ ಈ ಘಟನೆ ನಡೆದಿದೆ.

ಸುಬ್ಬಮ್ಮಳ ಎರಡನೇ ಮಗ ನಂಜುಂಡಿ ಹಾಗೂ ಅದೇ ಗ್ರಾಮದ ಸ್ವಾಮಿಯ ಪತ್ನಿ ಮಂಜುಳಾ ನಡುವೆ ಅಕ್ರಮ ಸಂಬಂಧ ಇತ್ತು.

ಇವರಿಬ್ಬರ ಕಳ್ಳ ಸಂಬಂಧವನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಗಂಡ ಸ್ವಾಮಿಗೆ ಕೆಲವರು ತೋರಿಸಿದ್ದರು. ಇದರಿಂದ ಕೆರಳಿದ್ದ ಸ್ವಾಮಿ, ನಂಜುಂಡಿಯ ಸಹೋದರ ಸಿದ್ದರಾಜು ಹಾಗೂ ಸುಬ್ಬಮ್ಮಳ ಜೊತೆ ಜಗಳ ತೆಗೆದಿದ್ದನು.

ಪಂಚಾಯ್ತಿ ನಡೆಸಿದ್ದರೂ ಮಂಜುಳಾ ಹಾಗೂ ನಂಜುಂಡಿ ಓಡಿಹೋಗಿದ್ದಾರೆ. ಹೀಗಾಗಿ ಮನನೊಂದು ಸುಬ್ಬಮ್ಮ- ಸಿದ್ದರಾಜು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಯಿ – ಸಹೋದರ ಸತ್ತರೂ ನಂಜುಂಡಿ ಊರಿಗೆ ಬಂದಿಲ್ಲ. ಹೀಗಾಗಿ ಪೊಲೀಸರು ಕೇಸ್ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ