ರಸ್ತೆ ಗುಂಡಿ ಮುಚ್ಚದ ಶಾಸಕನನ್ನ ತರಾಟೆಗೆ ತೆಗೆದುಕೊಂಡ ಯುವತಿ

ಭಾನುವಾರ, 28 ಆಗಸ್ಟ್ 2022 (17:14 IST)
ರಸ್ತೆ ಗುಂಡಿ ಮುಚ್ಚದ ಶಾಸಕ ರಘುಪತಿ ಭಟ್​​​ಗೆ ತರಾಟೆ ಯುವತಿಯೋರ್ವಳು ತರಾಟೆಗೆ ತೆಗೆದುಕೊಂಡಿದ್ದಾಳೆ. ಯುವತಿಯೊಬ್ಬರು ತರಾಟೆಗೆತ್ತಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ನೀವೂ ಅದೇ ರಸ್ತೆಯಲ್ಲಿ ಓಡಾಡಿದ್ರೂ 
ರಸ್ತೆಯಲ್ಲಿ ಗುಂಡಿ ಬಿದ್ದಿರುವುದು ಕಣ್ಣಿಗೆ ಕಾಣಿಸ್ತ ಇಲ್ವಾ. ನಿಮಗೆ ಸರಕಾರಿ ವಾಹನ ಇದೆ, ನಾವು ಕಷ್ಟದಿಂದ ವಾಹನ ಖರೀದಿಸಿ ಓಡಿಸುತ್ತೇವೆ. ಗುಂಡಿಗೆ ಎದ್ದು ಬಿದ್ದು ಸ್ಕೂಟರ್, ಕಾರು ಚಲಾಯಿಸುವಾಗ ವ್ಯಥೆಯಾಗುತ್ತದೆ. ಮಂಗಳೂರಿನಲ್ಲಿ ಮೋದಿ ಬರುತ್ತಿರುವ ಕಾರಣಕ್ಕೆ ರಸ್ತೆ ಸರಿಪಡಿಸುತ್ತಿದ್ದಾರೆ, ಅಷ್ಟಾದ್ರೂ ಆಗ್ತಿದೆ. ಉಡುಪಿ ರಸ್ತೆ ಸರಿ ಮಾಡೋಕೆ ಯಾರು ಬರಬೇಕು ಶಾಸಕ ರಘುಪತಿ ಭಟ್ಟರೇ ಎಂದು ಯುವತಿ ಪ್ರಶ್ನೆ ಮಾಡಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ