ಅಬ್ಬಬ್ಬಾ ಲಾಟರಿ..ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಯಾದ ಬೈಕ್ ಮೆಕಾನಿಕ್

Sampriya

ಗುರುವಾರ, 10 ಅಕ್ಟೋಬರ್ 2024 (16:24 IST)
Photo Courtesy X
ಮಂಡ್ಯ: ಇಲ್ಲಿನ ಬೈಕ್ ಮೆಕ್ಯಾನಿಕ್ ಒಬ್ಬರು ರಾತ್ರೋರಾತ್ರಿ ಕೋಟ್ಯಧಿಪತಿ ಆಗಿದ್ದಾರೆ. ಮಂಡ್ಯದ ಅಲ್ತಾಫ್ ಪಾಷಾ ಎಂಬವರು ಕೇರಳಕ್ಕೆ ಹೋಗಿದ್ದ ವೇಳೆ ₹500ಲಾಟರಿ ಟಿಕೆಟ್‌ ಅನ್ನು 5 ತಿಂಗಳ ಹಿಂದೆ ಖರೀದಿಸಿದ್ದರು.

ಇದೀಗ ಆ ಟಿಕೆಟ್‌ ಬರೋಬ್ಬರಿ ‌ 25 ಕೋಟಿ ರೂ. ಬಹುಮಾನ ಗೆದ್ದುಕೊಟ್ಟಿದೆ. ರಾತ್ರಿ ಬೆಳಗಾಗುವುದರೊಳಗೆ ಕರ್ನಾಟಕದ ಸಾಮಾನ್ಯ ವ್ಯಕ್ತಿಯೊಬ್ಬ ಕೋಟ್ಯಾಧಿಪತಿಯಾಗಿದ್ದಾನೆ.

ಅಲ್ತಾಫ್‌ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ. ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿರುವ ಅಲ್ತಾಫ್, ವಯನಾಡಿನಲ್ಲಿರುವ  ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು.ಈ ವೇಳೆ ‌ಪರಿಚಯಸ್ಥರ ಮೂಲಕ ಕೇರಳದ ತಿರುವೋಣಂ ಲಾಟರಿ  ಟಿಕೆಟ್‌ ಖರೀದಿ ಮಾಡಿದ್ದರು. ಇದೀಗ ಅಲ್ತಾಫ್ ಪಾಷಾ ಅವರು 25 ಕೋಟಿ ರೂ. ‌ಗೆದ್ದಿದ್ದಾರೆ.

ಈ ಬಗ್ಗೆ ಮಾಧ್ಯಮದ ಬಳಿ ಮಾತನಾಡಿದ ಅಲ್ತಾಫ್ ಅವರು, ಇದರಿಂದ ತುಂಬಾನೆ ಖುಷಿಯಾಗಿದ್ದೇನೆ. ಬಂದ ಹಣದಲ್ಲಿ ಮನೆ ಕಟ್ಟಿಸಿ, ಮಗಳಿಗೆ ಮದುವೆ ಮಾಡಿಸುತ್ತೇನೆ. ನನ್ನ ಕೈಯಲ್ಲಿ ಆಗುವಷ್ಟು ಜನ ಸಾಮಾನ್ಯರಿಗೆ ಸಹಾಯ ಮಾಡುತ್ತೇನೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ