ಶಾಂತಿಭಂಗಕ್ಕೆ ಯತ್ನ: ಓರ್ವ ಗಡಿಪಾರು, ಮತ್ತೋರ್ವನ ಬಂಧನ

ಶನಿವಾರ, 7 ಅಕ್ಟೋಬರ್ 2017 (22:25 IST)
ಧಾರವಾಡ: ಕಾನೂನುಬಾಹಿರ ಚಟುವಟಿಕೆ ಹಾಗೂ ಶಾಂತಿಭಂಗ ಮಾಡುತ್ತಿದ್ದ ಇಬ್ಬರ ಮೇಲೆ ಹುಬ್ಬಳ್ಳಿ-ಧಾರವಾಡ ಆಯುಕ್ತ ಎಂ.ಎನ್.ನಾಗರಾಜ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಓರ್ವನ ಗಡಿಪಾರಿಗೆ ಆದೇಶಿಸಿದ್ದು, ಮತ್ತೊಬ್ಬನಿಗೆ ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.

ಧಾರವಾಡದ ಶಾಂತಿನಿಕೇತನ ‌ನಿವಾಸಿ ಮೋಹನ್ ಅಲಿಯಾಸ್ ಚೀಟರ್ ಮೋನ್ಯಾ(60) ಗಡಿಪಾರು ಮಾಡಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ನಾಗರಾಜ್  ಆದೇಶಿಸಿದ್ದಾರೆ. ಈತನ ಮೇಲೆ 24 ಪ್ರಕರಣಗಳು ದಾಖಲಾಗಿವೆ. ಈತನಿಗೆ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸುವ ಸಲುವಾಗಿ ಗಡಿಪಾರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ಅವಧಿ ಮುಗಿಯುವವರೆಗೆ ಮೋನ್ಯಾ ಧಾರವಾಡ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂದು ಆದೇಶ ನೀಡಲಾಗಿದೆ‌.

ಇನ್ನು ನಗರದ ಬಾಕಳೆ ಗಲ್ಲಿಯ ರಮೇಶ ಮೇತ್ರಾಣಿ(54) ವಿರುದ್ಧ ಗೂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ‌. ಈತನ ವಿರುದ್ಧವೂ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಕಾನೂನು ಸುವ್ಯವಸ್ಥೆ ನಿಯಂತ್ರಿಸುವುದು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮೇತ್ರಾಣಿಯನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ