ಸಾಲಬಾಧೆಯಿಂದ ಮೃತಪಟ್ಟ ನೇಕಾರನ ಕುಟುಂಬಕ್ಕೆ ನಟಿ ಉಮಾಶ್ರೀ ನೆರವು

ಗುರುವಾರ, 1 ಜುಲೈ 2021 (12:30 IST)
ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ರಾಂಪುರ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೇ ಸ್ವಯಂ ಹತ್ಯೆ ಮಾಡಿಕೊಂಡ ನೇಕಾರನ ಮನೆಗೆ ಭೇಟಿ ಕೊಟ್ಟ ನಟಿ, ಮಾಜಿ ಸಚಿವೆ ಉಮಾಶ್ರೀ ಆರ್ಥಿಕ ನೆರವು ನೀಡಿದ್ದಾರೆ.


ನೇಕಾರ ಷಣ್ಮುಖ ಮುರಗುಂಡಿ ಮಂಗಳವಾರದಂದು ಸಾಲಬಾಧೆ ತಾಳಲಾರದೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಅವರ ಮನೆಗೆ ಭೇಟಿ ನೀಡಿದ ಉಮಾಶ್ರೀ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಲ್ಲದೆ, 10 ಸಾವಿರ ರೂ. ಆರ್ಥಿಕ ನೆರವು ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು ಕೊವಿಡ್ ನಿಂದಾಗಿ ನೇಕಾರರು ಸಂಕಷ್ಟಕ್ಕೀಡಾಗಿದ್ದಾರೆ. ಅವರ ಸಾಲದ ಬಡ್ಡಿ, ವಿದ್ಯುತ್ ಬಿಲ್ ಮನ್ನಾ ಮಾಡಿ ಸರ್ಕಾರ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ