ಅಭಿಮಾನಿಗಳಿಗೆ ಸುದೀಪ್, ಪುನೀತ್ ಕೊಟ್ಟ ಸ್ವೀಟ್ ನ್ಯೂಸ್ ಏನ್ ಗೊತ್ತಾ…?

ಶನಿವಾರ, 23 ಸೆಪ್ಟಂಬರ್ 2017 (08:21 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರನ್ನು ಒಟ್ಟಿಗೆ ತೆರೆ ಮೇಲೆ ನೋಡಬೇಕು ಎಂಬ ಆಸೆ ಅಭಿಮಾನಿಗಳದ್ದು. ಹಾಗೆ ಒಳ್ಳೆಯ ಕಥೆ ಸಿಕ್ಕರೆ ಇಬ್ಬರೂ ಒಟ್ಟಿಗೆ ನಟಿಸುತ್ತೇವೆ ಎಂದು ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಹೇಳಿಕೊಂಡಿದ್ದರು. ಈಗ ಅಭಿಮಾನಿಗಳಿ ಕನಸು ನನಸಾಗುವ ಸೂಚನೆ ಸಿಕ್ಕಿದೆ.

ಸ್ಯಾಂಡಲ್ ವುಡ್ ನಲ್ಲಿ ಮಲ್ಟಿಸ್ಟಾರ್ ನಟನೆಯ ಸಿನಿಮಾಗಳ ಹವಾ ಹೆಚ್ಚಾಗಿದೆ. ಸುದೀಪ್, ಶಿವರಾಜ್ ಕುಮಾರ್ `ದಿ ವಿಲನ್’ ಮೂಲಕ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ಸಿನಿಮಾ ಚಂದನವನದಲ್ಲಿ ಕುತೂಹಲ ಜಾಸ್ತಿ ಮಾಡ್ತಿದೆ. ಶಿವಣ್ಣ ಬಳಿಕ ರಾಜ್ ಫ್ಯಾಮಿಲಿಯ ರಾಜಕುಮಾರ ಪುನೀತ್ ಜತೆ ಸುದೀಪ್ ಬಣ್ಣ ಹಚ್ಚಲಿದ್ದಾರಂತೆ.

ಇವರಿಬ್ಬರ ಈ ಕಾಂಬಿನೇಷನ್ ಗಾಗಿಯೇ ಮಾಧವನ್ ಮತ್ತು ವಿಜಯ್ ಸೇತುಪತಿ ಅಭಿನಯದ ತಮಿಳು ಸಿನಿಮಾ ವಿಕ್ರಂಸೇತು ಸಿನಿಮಾದ ರಿಮೇಕ್ ರೈಟ್ಸ್ ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸಿನಿಮಾ ಕೂಡ ನಿರ್ಮಾಪಕ ಸಿ.ಆರ್.ಮನೋಹರ್ ನಿರ್ಮಾಣ ಮಾಡಲಿದ್ದು, ಇನ್ನೂ ಎರಡು ಭಾಷೆಗಳಿಗೆ ರಿಮೇಕ್ ಮಾಡುವ ಆಸೆ ಇದೆಯಂತೆ.

ಜುಲೈ ತಿಂಗಳಲ್ಲಿ ತಮಿಳಿನಲ್ಲಿ ತೆರೆಕಂಡಿದ್ದ `ವಿಕ್ರಂಸೇತು’ ಚಿತ್ರಕ್ಕೆ 11 ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗಿದ್ದ ಈ ಸಿನಿಮಾ 50 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಮಾಡಿತ್ತು. ಆದಷ್ಟು ಬೇಗ ಸ್ಟಾರ್ ನಟರನ್ನು ತೆರೆಮೇಲೆ ನೋಡುವ ಆಸೆ ಈಡೇರಲಿ ಅನ್ನೋದು ಗಾಂಧಿನಗರದ ಮಂದಿಯ ಮಾತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ