ಕೆ.ಎಸ್.ಡಿ.ಎಲ್.ನಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಅಂತ ಆರೋಪಿಸಿ ದಾಖಲೆ ಸಮೇತ ಆರೋಪ

ಗುರುವಾರ, 9 ಮಾರ್ಚ್ 2023 (14:04 IST)
ಕೆ.ಎಸ್.ಡಿ.ಎಲ್.ನಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಅಂತ ಆರೋಪಿಸಿ ದಾಖಲೆ ಸಮೇತ ಆರೋಪ ಮಾಡಿದ್ದ ಕೆ.ಎಸ್.ಡಿ.ಎಲ್.ನ ಅಧ್ಯಕ್ಷರಾಗಿರುವ  ಜಿ.ಆರ್ ಶಿವಶಂಕರ್ ಆರೋಪಿಸಿದ್ದರು.ಇದಕ್ಕೆ ಪ್ರತಿಕ್ರಿಯೆಯಾಗಿ ಯಾವ ಅಕ್ರಮ ಆಗಿಲ್ಲ ಎಂದು ಕೆ.ಎಸ್.ಡಿ.ಎಲ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಸಂಘದಿಂದ ಪತ್ರಿಕಾಗೋಷ್ಠಿ ನೆಡಿಸಿ
ಸರ್ಕಾರಿ ಸಾಬೂನು ಕಾರ್ಖಾನೆಯಲ್ಲಿ ಯಾವುದೇ ಅಕ್ರಮ ಆಗಿಲ್ಲ. ಬೇಕಿದ್ದರೆ ತನಿಖೆ ಯಾಗಲಿ ಎಂದು ಸಮರ್ಥಿಸಿಕೊಂಡಿದ್ದಾರೆ.ಇನ್ನೂ ಮಾಡಾಳ್ ಲಂಚ ಪ್ರಕರಣ ಹಿನ್ನಲೆ ಕೆಎಸ್ ಡಿಎಲ್ ಬಗ್ಗೆ ಮೂಡಿದ್ದ ಹಲವು ಪ್ರಶ್ನೆಗಳಿಗೆ ಈ ಲಂಚ ಕೇಸ್ ಗೂ ಕಾರ್ಖಾನೆಗೂ ಸಂಬಂಧವಿಲ್ಲ ನಮ್ಮ ಸಂಸ್ಥೆ ಲಾಭದಾಯಕವಾಗಿ ನಡೆಯುತ್ತಿದೆ 2020- 2023 ಆರ್ಥಿಕ ವರ್ಷದಲ್ಲಿ ಕಂಪನಿ 30,860 ಮೆಟ್ರಿಕ್ ಟನ್ ಕಚ್ಚಾ ಸಾಮಗ್ರಿಗಾಗಿ 551 ಕೋಟಿ ಹಣ ವ್ಯಯ ಮಾಡಲಾಗಿತ್ತು. 2023-2024 ನೇ ಸಾಲಿನಲ್ಲಿ 34,186 ಮೆಟ್ರಿಕ್ ಟನ್ ಉತ್ಪಾದನಾ ಗುರಿಗೆ 525 ಕೋಟಿ ಹಣ ವ್ಯಯ ಮಾಡಲಾಗಿದೆ. ಈಮೂಲಕ 26 ಕೋಟಿ ಹಣ ಉಳಿತಾಯ ಮಾಡಲಾಗಿದೆ. ಸುಮಾರು 106 ವರ್ಷ ಇತಿಹಾಸ ವಿರುವ ಬ್ರಾಂಡೆಡ್ ಕಾರ್ಖಾನೆ ಎಂದು ಸಮರ್ಥಿಸಿಕೊಂಡು,ಶಿವಶಂಕರ್ ಹೇಳಿಕೆ ಬ್ರಾಂಡ್ ನೇಮ್ ಹಾಳುಮಾಡುವಂತಿದೆ ಎಂದು ಅರೋಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ