ಭರ್ಜರಿ ಗೆಲುವಿನ ಬೆನ್ನಲ್ಲೇ ಶಿವರಾಮೇಗೌಡರಿಂದ ಅಮಾವಾಸ್ಯೆ ಪೂಜೆ

ಬುಧವಾರ, 7 ನವೆಂಬರ್ 2018 (15:02 IST)
ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯ ಕಾಲಭೈರವನಿಗೆ ಅಮಾವಾಸ್ಯೆ ಪೂಜೆಯನ್ನು ನೂತನ ಸಂಸದ ಶಿವರಾಮೇಗೌಡ ಸಲ್ಲಿಸಿದರು.

ಚುಂಚಶ್ರೀ ನಿರ್ಮಲಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಅಮವಾಸ್ಯೆ ಪೂಜೆಯಲ್ಲಿ ಸಂಸದರು ಪಾಲ್ಗೊಂಡಿದ್ದರು.
ಅಮಾವಾಸ್ಯೆ ಯಲ್ಲಿ ಕುಟುಂಬ ಸಮೇತರಾಗಿ ಭಾಗಿಯಾದ ನೂತನ ಸಂಸದ ಎಲ್. ಆರ್. ಶಿವರಾಮೇಗೌಡ,
ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಅತ್ಯಂತ ಬಹುಮತದೊಂದಿಗೆ ಜಯಗಳಿಸಿರುವ ಶಿವರಾಮೇಗೌಡ ಪೂಜೆಯಲ್ಲಿ ಪಾಲ್ಗೊಂಡರು.

ದಾಖಲೆ ಗೆಲುವಿನ ಹಿನ್ನಲೆಯಲ್ಲಿ ಕಾಲಭೈರವನಿಗೆ ವಿಷೇಶ ಪೂಜೆ ಸಲ್ಲಿಕೆ ಮಾಡಿದರು. ಕಾಲಭೈರವನಿಗೆ ಅಮವಾಸ್ಯೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ನೆರವೇರುತ್ತೆ ಅನ್ನೋ ನಂಬಿಕೆ ಜನರಲ್ಲಿದೆ. ಈ‌ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು, ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವಾರು ಪ್ರಮುಖರಿಂದ ಅಮಾವಾಸ್ಯೆ ಪೂಜೆ ಸಲ್ಲಿಕೆಯಾಗಿದೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ