ರಾಜಕೀಯಕ್ಕೆ ಯಾರು ಬೇಕಾದರೂ ಬರಬಹುದು: ಮಂತ್ರಾಲಯ ಶ್ರೀಗಳು

ಭಾನುವಾರ, 26 ಫೆಬ್ರವರಿ 2023 (15:51 IST)
ರಾಯಚೂರು : ರಾಜಕೀಯಕ್ಕೆ ಇಂಥವರೆ ಬರಬೇಕು, ಬರಬಾರದರು ಅಂತೇನಿಲ್ಲ, ರಾಜಕೀಯಕ್ಕೆ ಬಂದಂತಹ ವ್ಯಕ್ತಿಗಳು ರಾಜ್ಯದ ಜನತೆ ಬಗ್ಗೆ ಕಾಳಜಿ ಉಳ್ಳವರಾಗಿರಬೇಕು ಎಂದು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಉತ್ತರ ಪ್ರದೇಶದಂತೆ ರಾಜ್ಯದಲ್ಲೂ ಬಿಜೆಪಿಯಿಂದ ಸಂತರಿಗೆ ಸಿಎಂ ಸ್ಥಾನಮಾನದ ಆಲೋಚನೆ ವಿಚಾರಕ್ಕೆ ಮಂತ್ರಾಲಯದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಂತ್ರಾಲಯ ಶ್ರೀಗಳು ಮುಖ್ಯವಾಗಿ ನಾನು ಮೊದಲಿನಿಂದಲೂ ಹೇಳೋದು, ಇಂಥ ವ್ಯಕ್ತಿ ಬರಬೇಕು,

ಇಂಥವರೇ ಬರಬಾರದು ಎನ್ನುವುದಿಲ್ಲ. ರಾಜಕೀಯಕ್ಕೆ ಬಂದಂತ ವ್ಯಕ್ತಿಗಳು ರಾಜ್ಯದ ಜನತೆ ಬಗ್ಗೆ ಕಾಳಜಿ ಉಳ್ಳವರಾಗಿರಬೇಕು. ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವಂತ ವ್ಯಕ್ತಿ ಆಗಬೇಕು ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ