ದಿವಂಗತ ಎನ್.ಎಸ್ ದೇವಿಪ್ರಸಾದ್ ರವರ ಮನೆಗೆ ಭೇಟಿ ನೀಡಿದ ಎ.ಎಸ್ ಪೊನ್ನಣ್ಣ

ಬುಧವಾರ, 26 ಜನವರಿ 2022 (20:58 IST)
ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ರವರಿಂದ ಸಾಂತ್ವನ.
 ಇತ್ತೀಚೆಗೆ ನಿಧನಹೊಂದಿದ ಹಿರಿಯ ಸಾಹಿತಿ, ಮಾಜಿ ಅರೆಭಾಷೆ ಅಕಾಡೆಮಿ ಅಧ್ಯಕ್ಷರಾದ ಸಂಪಾಜೆ ದೇವಿಪ್ರಸಾದ್‌ ಅವರ ನಿವಾಸಕ್ಕೆ ಭೇಟಿ ನೀಡಿ ಮನೆಯವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ಪೊನ್ನಣ್ಣ ರವರ ತಂದೆ ದಿವಂಗತ ಏ.ಕೆ ಸುಬ್ಬಯ್ಯ ರವರು ಹಾಗೂ ದೇವಿಪ್ರಸಾದ್‌ ಅವರು ಉತ್ತಮ ಸ್ನೇಹಿತರಾಗಿದ್ದು ಗತಕಾಲದ ನೆನಪುಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ PL, ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಸೂರಜ್ ಹೊಸೂರು, ನಾಪೋಕ್ಲು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ, ಚಂಬು ಗ್ರಾಮ ಪಂಚಾಯತ್ ಸದಸ್ಯರಾದ ಗಿರೀಶ್ ಹೊಸೂರು, ಚಿಂಬು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾರತಿ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹನಿಫ್ ಸಂಪಾಜೆ, ಡಿಸಿಸಿ ಮಾಜಿ ಸದಸ್ಯರಾದ NC ಮನೋಹರ್, ಮೈದಿನ್ ಕುಹ್ನು, ಹಿರಿಯ ಕಾಂಗ್ರೆಸ್ಸಿಗರಾದ ಜೀ.ವಿ ಗಣಪಯ್ಯ, ಮಧು ಹೊಸೂರು, ಭರತ ಕೆದಂಬಾಡಿ,  ಲೋಕೇಶ್ ಹೊದ್ದೆಟ್ಟಿ, ವಿಕಿತ್ ಕುದುಕುಳಿ, ಕೇಟೋಳಿ ಮೋಹನ್‌ ರಾಜ್‌,  ಕೊಲ್ಯದ ಗಿರೀಶ್, ಬೇಕಲ್ ರಮಾನಾಥ್‌,  ಹೈ ಕೋರ್ಟ್ ಲಾಯರ್ ಬಿಪಿನ್ ಬೋಪಣ್ಣ ಮತ್ತಿತರರು ಭಾಗಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ