ಪೆಟ್ರೋಲ್ ಬಂಕ್ ಸಿಬ್ಬಂದಿಗಳ ಮೇಲೆ ಹಲ್ಲೆ: ಇಬ್ಬರು ಪುಂಡರ ಬಂಧನ, ಘಟನೆ ಸಿಸಿಟಿವಿಯಲ್ಲಿ ಸೆರೆ

ಗುರುವಾರ, 30 ಸೆಪ್ಟಂಬರ್ 2021 (21:07 IST)
ಬೆಂಗಳೂರು: ನಗರದ ಪೆಟ್ರೋಲ್ ಬಂಕ್ ಸಿಬ್ಬಂದಿಗಳ ಮೇಲೆ ಇಬ್ಬರು ಪುಂಡರಿಂದ ಹಲ್ಲೆ ನೆಡೆದಿದೆ. ಬಾಗಲಗುಂಟೆ ಬಸ್ ನಿಲ್ದಾಣದ ಬಳಿ ಇರುವ ಗ್ಯಾಸೊಲಿನ್ ಪೆಟ್ರೋಲ್ ಬಂಕ್ ನಲ್ಲಿ  ಕ್ಷುಲ್ಲಕ ಕಾರಣಕ್ಕೆ ನಾಲ್ಕು ದಿನದ ಹಿಂದೆ ಮಧ್ಯರಾತ್ರಿ ವೇಳೆಯಲ್ಲಿ ಚಾಕು ತೋರಿಸಿ ತಿವಿಯಲು ಹೋಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. 
 
ಅಂಜನ್ ಎನ್ನುವ ಬಂಕ್ ಸಿಬ್ಬಂದಿಗೆ ಹಲ್ಲೆ ಮಾಡಿದ ಪುಂಡರು ಬೈಕ್ ನಲ್ಲಿ ಬಂದಿದ್ದರು. ಮದ್ಯಪಾನ ಹಾಗೂ ಗಾಂಜಾ ಮತ್ತಿನಲ್ಲಿದ್ದ  ಆರೋಪಿಗಳು ಪೆಟ್ರೋಲ್ ಹಾಕಿಸುವ ವಿಚಾರವಾಗಿ ಕ್ಯಾತೆ ತೆಗೆದಿದ್ದಾರೆ. ಮಲ್ಲಸಂದ್ರದ ನಿವಾಸಿ ಮೋಹನ್(25) ಮತ್ತು  ಸುಮಂತ್(26) ಎನ್ನುವ ಯುವಕರನ್ನು ಸ್ಥಳದಲ್ಲಿಯೇ ಪೊಲೀಸರು ವಶಕ್ಕೆ ಪಡೆದಿದ್ದರು. ಯುವಕರ ಬಳಿಯಿದ್ದ ಚಾಕು ಕೂಡ ಜಪ್ತಿ ಮಾಡಿದ್ದರು. ಈ ಎಲ್ಲಾ ದೃಶ್ಯಗಳು ಸಿ.ಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದವು . 
 
ಘಟನೆಗೆ ಒಂದು ವರದ ಹಿಂದೆ ಕೂಡ ನೆಡೆದಿದ್ದ ಫೈಟ್: 
 
ಕ್ಷುಲ್ಲಕ ಕಾರಣಕ್ಕೆ ಘಟನೆ ನೆಡೆದ ಒಂದು ವರದ ಹಿಂದೆ ಕೂಡ ಸಿಬ್ಬಂದಿಗಳ ಜೊತೆಗೆ ಜಗಳ ನೆಡೆದಿತ್ತು, ಅದೇ ಸಿಟ್ಟಿನಲ್ಲಿ ಹಲ್ಲೆ ನೆಡೆಸಿರುವುದು ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ. ಈ ಸಂಭಂದ ಇಬ್ಬರೂ ಯುವಕರನ್ನು ಬಂಧಿಸಿದ್ದೇವೆ, ಠಾಣೆಯಲ್ಲಿ ಪ್ರಕರಣ ದಾಖಲಿಸಕೊಂಡು ಮುಂದಿನ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ