ನವವಿವಾಹಿತನ ಕೊಲೆಗೆ ಯತ್ನ

ಭಾನುವಾರ, 9 ಜನವರಿ 2022 (12:07 IST)
ಬೆಂಗಳೂರು: ವೀಕೆಂಡ್ ಕರ್ಫ್ಯೂ ಜಾರಿಯಾಗಿರುವ ಬೆನ್ನಲ್ಲೂ ಶಿಡ್ಲಘಟ್ಟದಲ್ಲಿ ನವವಿವಾಹಿತ ವ್ಯಕ್ತಿಯನ್ನು ಹಲ್ಲೆ ನಡೆಸಿ ಕೊಲೆ ಮಾಡಲೆತ್ನಿಸಲಾಗಿದೆ.

ತಮಿಳುನಾಡು ಮೂಲದ 35 ವರ್ಷದ ವ್ಯಕ್ತಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಸೆಂಬರ್ 25 ರಂದು ಈ ವ್ಯಕ್ತಿಯ ವಿವಾಹವಾಗಿತ್ತು.

ಪತ್ನಿಯೊಂದಿಗೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ