ಬಿ.ಶ್ರೀರಾಮುಲು ಚೇತರಿಕೆಗೆ ನಿತ್ಯ ಒಡೆಯುತ್ತಿರುವ ಟೆಂಗು ಎಷ್ಟು?

ಸೋಮವಾರ, 10 ಆಗಸ್ಟ್ 2020 (20:41 IST)
ರಾಜ್ಯದ ಆರೋಗ್ಯ ಸಚಿವರಿಗೆ ತಗುಲಿರುವ ಕೊರೊನಾದಿಂದ ಗುಣಮುಖರಾಗಲೆಂದು ಅವರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.


ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಕೋವಿಡ್ ಸೋಂಕಿತರಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೇಗ ಗುಣಮುಖರಾಗಲಿ ಎಂದು ಅವರ ಆಪ್ತ ನಿತ್ಯವೂ ನೂರಾರು ಟೆಂಗು ಒಡೆಯುತ್ತಿದ್ದಾರೆ.

ಕೋಟೆ ಮಲ್ಲೇಶ್ವರ ದೇವಸ್ಥಾನದಲ್ಲಿ ಬಿ.ಶ್ರೀರಾಮುಲು ಅವರ ಆಪ್ತ ಮಾಜಿ ಉಪಮೇಯರ್ ಗೋವಿಂದ ರಾಜುಲು 116 ತೆಂಗಿನಕಾಯಿ ಒಡೆದರು. ಶನಿವಾರದವರೆಗೆ ನಿತ್ಯವೂ  ಸಾಯಿಬಾಬಾ, ರಾಘವೇಂದ್ರ, ಆಂಜನೇಯ, ಏಳು ಮಕ್ಕಳ ತಾಯಿ, ದುರ್ಗಮ್ಮ ದೇವಸ್ಥಾನದಲ್ಲಿ ತೆಂಗಿನಕಾಯಿ ಒಡೆಯುವುದಾಗಿ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ