ಮಗುವಿನ ಪಾಲಿಗೆ ಯಮನಾಗಿ ಬಂದ ಲಾರಿ

ಶನಿವಾರ, 16 ಡಿಸೆಂಬರ್ 2017 (14:44 IST)
ಮೈಸೂರು: ಮಗುವಿನ ಮೇಲೆ ಲಾರಿ ಹರಿದು ಮಗು ಸ್ಥಳದಲ್ಲೇ ಸಾವನಪ್ಪಿದ ಘಟನೆ ಟಿ.ನರಸೀಪುರ ತಾಲೂಕಿನ ವ್ಯಾಸರಾಜಪುರದ ಬಳಿ ನಡೆದಿದೆ.


ಮಂಡ್ಯಜಿಲ್ಲೆಯ ಕೆಎಂ ದೊಡ್ಡಿಯ  ನಿವಾಸಿಯಾದ ಕೆಂಚ 5 ವರ್ಷದ ಗಂಡು ಮಗು ರಸ್ತೆ ದಾಟುವಾಗ ಈ ಘಟನೆ ಸಂಭವಿಸಿದೆ. ಮಗುವಿನ  ಮೃತದೇಹ ಕಂಡು ಪೋಷಕರ ದುಃಖ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಬಂದ ನರಸೀಪುರ ಪೊಲೀಸರು ಪರಿಶೀಲಿಸಿ, ಮಗುವಿನ ಮೃತ ದೇಹದ ಬಿಡಿ ಭಾಗಗಳನ್ನು ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು.


ಈ ಪ್ರಕರಣ ನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸಾರಿಗೆ ಆಯುಕ್ತರ ಕಚೇರಿಯಲ್ಲಿದ್ದ ಆ ಲಾರಿಗೆ ಸಂಬಂಧಪಟ್ಟ ದಾಖಲೆಗಳ ಆಧಾರದ ಮೇಲೆ ಅದರ ಮಾಲೀಕರನ್ನು ಪತ್ತೆ ಹಚ್ಚಿ ಚಾಲಕನ್ನು ಪತ್ತೆಮಾಡುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ