ಗ್ರಾ.ಪಂ.ಅಧ್ಯಕ್ಷ ಸ್ಥಾನ ದುರ್ಬಳಕೆ ಹಿನ್ನಲೆ; ಗ್ರಾ.ಪಂ.ಅಧ್ಯಕ್ಷೆಯ ವಿರುದ್ಧ ದೂರು

ಸೋಮವಾರ, 22 ಜೂನ್ 2020 (11:16 IST)
Normal 0 false false false EN-US X-NONE X-NONE

ಚಿಕ್ಕಮಗಳೂರು : ಎಸ್ ಬಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದರ್ಪ ಮೇರೆದ ಹಿನ್ನಲೆಯಲ್ಲಿ ಆಕೆಯ ವಿರುದ್ಧ ಚಿಕ್ಕಮಗಳೂರು ಡಿಸಿಗೆ ದೂರು ನೀಡಲಾಗಿದೆ.
 

ತನ್ನ ಮನೆಯ ಸೌಂದರ್ಯಕ್ಕೆ ಬಸ್ ನಿಲ್ದಾಣ ಅಡ್ಡಿಯಾಗುತ್ತಿರುವ  ಹಿನ್ನಲೆಯಲ್ಲಿ ಸರ್ಕಾರಿ ಬಸ್ ನಿಲ್ದಾಣವನ್ನೇ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿದ್ಧಾಪುರದಲ್ಲಿನ ಗ್ರಾ.ಪಂ.ಅಧ್ಯಕ್ಷೆ ದ್ರಾಕ್ಷಾಯಣಮ್ಮ ಧ್ವಂಸಗೊಳಿಸಿದ್ದಾರೆ. ದ್ರಾಕ್ಷಾಯಣಮ್ಮರಿಂದ ಗ್ರಾ.ಪಂ.ಅಧ್ಯಕ್ಷ ಸ್ಥಾನ ದುರ್ಬಳಕೆ ಆಗುತ್ತಿದ್ದು,  ಈಗ ಬಸ್ ನಿಲ್ದಾಣವಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಆದಕಾರಣ ಗ್ರಾ.ಪಂ.ಅಧ್ಯಕ್ಷೆ ವಿರುದ್ಧ ಚಿಕ್ಕಮಗಳೂರು ಡಿಸಿಗೆ ದೂರು ನೀಡಲಾಗಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ