ವಾಹನ‌ ಸವಾರರನ್ನು ಯಮನಂತೆ ಕಾಡುತ್ತಿರುವ ಬೆಂಗಳೂರಿನ ರಸ್ತೆಗುಂಡಿಗಳು

ಸೋಮವಾರ, 24 ಅಕ್ಟೋಬರ್ 2022 (20:52 IST)
ರಸ್ತೆ ಗುಂಡಿಗಳಿಂದ ಬೆಂಗಳೂರಿನಲ್ಲಿ ಸಾಲು ಸಾಲು ಅಪಘಾತ ಸಂಭವಿಸುತ್ತಿದೆ.ರಸ್ತೆ ಗುಂಡಿಗಳ ವಿರುದ್ಧ ದೀಪಾವಳಿ ಹಬ್ಬದ ದಿನ ವಿಭಿನ್ನವಾಗಿ ಪ್ರತಿಭಟನೆ ಮಾಡಲಾಗಿದೆ.ವಂದೇ ಮಾತರಂ ಸಂಘಟನೆಯಿಂದ ಬೆಂಗಳೂರಿನ ಹೃದಯ ಭಾಗ ಕೆಂಪೆಗೌಡ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಮಾಡಲಾಗಿದ್ದು,ಬಸ್ ನಿಲ್ದಾಣದ ಮುಂಭಾಗದಲ್ಲಿ ಇವೆ ರಕ್ಕಸ ಗುಂಡಿಗಳು ಎಂದು ಗುಂಡಿಗಳಲ್ಲಿ ದೀಪ ಹಚ್ಚುವ ಮೂಲಕ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ರು.
 
ದೀಪಾವಳಿ ಹಬ್ಬದಂದು ಗುಂಡಿಯಲ್ಲಿ ದೀಪಗಳನ್ನು ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದಾರೆ.ಇನ್ನಾದ್ರು ಬಿಬಿಎಂಪಿ ಎಚ್ಚೆತ್ತು ಗುಂಡಿ ವಿಚಾರವಾಗಿ ಬಿಬಿಎಂಪಿಯ ಅಂಧಕಾರ ತೊಲಗಲಿ ಎಂದು ಆಕ್ರೋಶ ಹೊರಹಾಕಿದ್ರು. ಅಲ್ಲದೇ ರಸ್ತೆಗುಂಡಿಗೆ ದೀಪ ಹಚ್ಚಿ ರಸ್ತೆ ಗುಂಡಿಗಳಲ್ಲೇ ಕುಳಿತು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ