ಬಿಜೆಪಿಗೆ ಮುಸ್ಲಿಮರ ಬಗ್ಗೆ ಕೆಟ್ಟ ಅಭಿಪ್ರಾಯವಿದೆ, ಮಂಗಳೂರು ಪರಿಸ್ಥಿತಿಗೆ ಅವರೇ ಕಾರಣ: ದಿನೇಶ್ ಗುಂಡೂರಾವ್
ಬಂಟ್ವಾಳದಲ್ಲಿ ಮುಸ್ಲಿಂ ಯುವಕ ಅಬ್ದುಲ್ ರಹಿಮಾನ್ ಮರ್ಡರ್ ಹಿನ್ನಲೆಯಲ್ಲಿ ಅವರು ಬಿಜೆಪಿ ಮತ್ತು ಆರ್ ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಶಾಂತಿ ವ್ಯವಸ್ಥೆ ಹಾಳಾಗಿರುವುದಕ್ಕೆ ಬಿಜೆಪಿ ಮತ್ತು ಆರ್ ಎಸ್ಎಸ್ ಕಾರಣ ಎಂದಿದ್ದಾರೆ.
ಮುಸ್ಲಿಂ ಯುವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವುದು ನೋವಿನ ಸಂಗತಿ. ಮಂಗಳೂರಿನಲ್ಲಿ ಸರಣಿ ಹತ್ಯೆಯಾಗುತ್ತಿರುವುದರಿಂದ ರಾಜ್ಯಕ್ಕೂ ಕೆಟ್ಟ ಹೆಸರು. ಬಿಜೆಪಿಯವರದ್ದು ಹೆಣದ ಮೇಲೆ ರಾಜಕಾರಣ ಮಾಡುವ ಗುಣ. ಅವರದ್ದು ವಿಷ, ಕೊಳಕು ತುಂಬಿದ ಮನಸ್ಸು. ಅವರಿಗೆ ಮನುಷ್ಯತ್ವ ಯಾವುದೂ ಇಲ್ಲ . ಇಲ್ಲಿ ಕೆಟ್ಟ ವ್ಯವಸ್ಥೆ ನಿರ್ಮಾನವಾಗಲೂ ಬಿಜೆಪಿಗರೇ ಕಾರಣ ಎಂದಿದ್ದಾರೆ.