ಬಿಬಿಎಂಪಿಯಿಂದ ಬೀದಿ ಬದಿ ವ್ಯಾಪಾರಸ್ಥರ ಮೇಲೆ ಸಮರ

ಬುಧವಾರ, 8 ನವೆಂಬರ್ 2023 (15:05 IST)
ಇನ್ಮೇಲೆ ಪುಟ್ ಪಾಥ್ ನಲ್ಲಿ ಅಂಗಡಿ ಮುಂಗಟ್ಟಿನವರಿಗೆ ಬಿಬಿಎಂಪಿಯಿಂದ ಸಂಕಷ್ಟ ಎದುರಾಗಿದೆ.ಪಾಲಿಕೆ ಜೆಸಿಬಿಗಳಿಂದ ಬೀದಿ ಬದಿ ವ್ಯಾಪಾರಗಳ ತೆರವು ಮಾಡಲಾಗುತ್ತೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
 
ಚಿಕ್ಕಪೇಟೆ,ಗಾಂಧಿ ನಗರ ,ಶಿವಾಜಿನಗರ ,ಯಶವಂತಪುರ,ಹಲವು ಏರಿಯಾಗಳನ್ನ ಪಾಲಿಕೆ ಗುರುತು ಮಾಡಿದೆ.ಪುಟ್ಪಾತ್ ಕಾರ್ಯಚರಣೆಗೂ ಮೊದಲೇ ಬಿಬಿಎಂಪಿ ನೋಟಿಸ್ ನೀಡ್ತಿದೆ.ನೋಟಿಸ್ ಗೆ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಈಗಾಗಲೇ ಮಲೇಶ್ವರಂ, ಜಯನಗರದಲ್ಲಿ ತೆರವು ಕಾರ್ಯಚರಣೆ ನಡೆದಿದೆ.ಈ ಮೂಲಕ ಬೀದಿ ವ್ಯಾಪಾರಿಗಳಿಗೆ ಅಧಿಕಾರಿಗಳು ವಾರ್ನಿಂಗ್ ಕೊಟ್ಟಿದ್ದಾರೆ.ಬೇರೆ ಕಡೆ ಎಲ್ಲಿಗೆ ಹೋಗೊದು ಎಂದು ವ್ಯಾಪಾರಿಗಳು ತಲೆಕೆಡಿಸಿಕೊಂಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ