ನಮ್ಮ ಸರ್ಕಾರ ಅಲುಗಾಡಿಸೋದು ಮೋದಿ ಪ್ಲಾನ್ -ಸಚಿವ ಕೃಷ್ಣ ಬೈರೇಗೌಡ

ಮಂಗಳವಾರ, 7 ನವೆಂಬರ್ 2023 (18:43 IST)
ಕೇಂದ್ರಕ್ಕೆ ರಾಜ್ಯ ಸರ್ಕಾರ ಬರ ಅಧ್ಯಯನ ವರದಿ ಸಲ್ಲಿಸಿಲ್ಲ ಎಂಬ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವ್ರೇನು ಮಾತನಾಡ್ತಾರೆ ಅವರಿಗೆ ಗೊತ್ತಿರಲ್ಲ ಪ್ರಶ್ನೆ ಗಂಭೀರತೆಯಿಂದ ಕೇಳಿದ್ರೆ ಉತ್ತರ ಕೊಡ್ತೀನಿ.ಕಟೀಲ್  ಬಾಯಿಗೆ ಬಂದದ್ದು ಮಾತಾಡ್ತಾರೆ ಅಂತಾ ಅದಕ್ಕೆಲ್ಲಾ ಉತ್ತರ ಕೊಡೊಕೆ ಆಗುತ್ತಾ ನಾವು ಅಂತಾ  ಕೃಷ್ಣ ಭೈರೇಗೌಡ  ಕಿಡಿಕಾರಿದ್ರು.

ಪ್ರಧಾನಿ ಹೇಳಿಕೆ ಗಮನಿಸಿದರೆ ಅವರು ನಮ್ಮ ಸರ್ಕಾರವನ್ನು ಅಲುಗಾಡಿಸುವ ಆಲೋಚನೆ ಮಾಡಿದಂತೆ ಭಾಸವಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಹಿಂದೆಯೂ ಒಮ್ಮೆ ಪ್ರಧಾನಿ ನಮ್ಮ ಸರ್ಕಾರವನ್ನು ಅಲುಗಾಡಿಸುವ ಆಲೋಚನೆ ಮಾಡಿದ್ದರು. ಈಗಲೂ ನಾವು ಅದೇ ರೀತಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಪ್ರಧಾನಿಯವರ ಯಾವ ಪ್ರಯತ್ನವೂ ಈಡೇರುವುದಿಲ್ಲ ನಾವೆಲ್ಲ ಚೆನ್ನಾಗಿದ್ದೇವದೆ ಎಂದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ