ತೆಲಂಗಾಣ ಪ್ರವೇಶಿಸಿದ ಭಾರತ್​ ಜೋಡೋ

ಭಾನುವಾರ, 23 ಅಕ್ಟೋಬರ್ 2022 (16:40 IST)
ಕಾಂಗ್ರೆಸ್​​ ನಾಯಕ ರಾಹುಲ್​​​ ಗಾಂಧಿ ನೇತೃತ್ವದ ಭಾರತ್​​ ಜೋಡೋ ಪಾದಯಾತ್ರೆ ರಾಯಚೂರು ಜಿಲ್ಲೆಯ ಗಡಿ ಶಕ್ತಿ ನಗರದ ಬಳಿ ಕೃಷ್ಣಾನದಿ ಸೇತುವೆಯನ್ನು ದಾಟಿದ್ದು, ತೆಲಂಗಾಣ ರಾಜ್ಯವನ್ನು ಪ್ರವೇಶಿಸಿದೆ. ಯರಮರಸ್​​ನಲ್ಲಿ ವಾಸ್ತವ್ಯ ಹೂಡಿದ್ದ ಪಾದಯಾತ್ರಿಗಳು ಐದನೇ ರಾಜ್ಯದತ್ತ ತೆರಳಿದ್ರು. KPCC ಅಧ್ಯಕ್ಷ ಡಿ.ಕೆ ಶಿವಕುಮಾರ್​, ವಿಪಕ್ಷ ನಾಯಕ ಸಿದ್ದರಾಮಯ್ಯ, KPCC ಪ್ರಚಾರ ಸಮಿತಿ ಅಧ್ಯಕ್ಷ M.B ಪಾಟೀಲ್​​​​ ಸೇರಿದಂತೆ ರಾಜ್ಯ ಕಾಂಗ್ರೆಸ್​​ ನಾಯಕರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ರು. ಸೇತುವೆ ಬಳಿ ತೆಲಂಗಾಣ ರಾಜ್ಯ ಕಾಂಗ್ರೆಸ್​​​ ರಾಹುಲ್​​ ಗಾಂಧಿಯನ್ನು ಸ್ವಾಗತ ಮಾಡಿದ್ರು. ತೆಲಂಗಾಣದಲ್ಲಿ ರಾಹುಲ್​​ ಗಾಂಧಿ ಭಾರತ್​ ಜೋಡೋ ಯಾತ್ರೆ ಮುಂದುವರೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ