ಸಿದ್ದರಾಮಯ್ಯ ಪುತ್ರನನ್ನ ಟೀಕಿಸಿದ ಬಿಜೆಪಿ

geetha

ಸೋಮವಾರ, 5 ಫೆಬ್ರವರಿ 2024 (20:38 IST)
ಬೆಂಗಳೂರು : ಯತೀಂದ್ರ ಸಿದ್ದರಾಮಯ್ಯ ಅವರು ವರ್ಗಾವಣೆ ದಂಧೆಯಲ್ಲಿ ತಮ್ಮ ವ್ಯಾಪ್ತಿಯನ್ನು ಮೈಸೂರಿನಿಂದ ರಾಜ್ಯಾದ್ಯಂತ ವಿಸ್ತರಿಸಿಕೊಂಡಿದ್ದಾರೆ. ಜೊತೆಗೆ ಅವರು ಹಲೋ ಅಪ್ಪ, ಡಾಕ್ಟರ್‌ ಚೀಟಿ, ವೈಎಸ್‌ಟಿ, ಟ್ರಾನ್ಸ್‌ ಫರ್‌ ಕಿಂಗ್‌ ಮತ್ತು ತಂದೆಗೆ ತಕ್ಕ ಮಗ ಇತ್ಯಾದಿ ಬಿರುದುಗಳನ್ನು ಗಳಿಸಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ. ಜೊತೆಗೆ,  ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ತಂದೆ ಸಿದ್ದರಾಮಯ್ಯ ಅವರ ಕೀರ್ತಿಪತಾಕೆಯನ್ನು ಹಾರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.  ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಇಬ್ಬರೂ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದಾರೆಂದು ಬಿಜೆಪಿ ಆರೋಪಿಸಿದೆ. ಭಾನುವಾರ ಈ ಕುರಿತು ಎಕ್ಸ್‌ ಮೂಲಕ ಸಂದೇಶ ಹಂಚಿಕೊಂಡಿರುವ ಬಿಜೆಪಿ ಸಿಎಂ ಪುತ್ರನ ವರ್ಗಾವಣೆ ದಂಧೆ ರಾಜ್ಯದ ತುಂಬಾ ವಿಸ್ತರಿಸಿದೆ ಎಂದು ಟೀಕಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ