ಕಣ್ಣೀರು ಹಾಕಿದ ಸಿಎಂಗೆ ವುಡ್ ವರ್ಡ್ಸ್ ಕಳಿಸಿದ ಬಿಜೆಪಿಗರು!

ಮಂಗಳವಾರ, 17 ಜುಲೈ 2018 (20:19 IST)
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಇತ್ತೀಚೆಗೆ ಹೋದ ಕಡೆಯಲ್ಲೆಲ್ಲಾ ಕಣ್ಣೀರಯ ಹಾಕುತ್ತಿರೋದನ್ನ ವ್ಯಂಗ್ಯ ಮಾಡಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಕುಮಾರಸ್ವಾಮಿ ಕಣ್ಣೀರ ಧಾರೆಗೆ  ವುಡ್ ವರ್ಡ್ಸ್ ಪಾರ್ಸೆಲ್ ಕಳುಹಿಸಿದ್ರು

ಮಂಡ್ಯದ ಪ್ರಧಾನ ಅಂಚೆ ಕಚೇರಿಯಲ್ಲಿ ಪೋಸ್ಟ್ ಮೂಲಕ ಎಚ್ಡಿಕೆಗೆ ವುಡ್ ವರ್ಡ್ಸ್ ಪಾರ್ಸೆಲ್ ಮಾಡಿದ ಬಿಜೆಪಿ ಕಾರ್ಯಕರ್ತರು, ಸಿಎಂ ಮತ್ತೆ ಮತ್ತೆ ಆಳುತ್ತಿರೋದನ್ನ ವ್ಯಂಗ್ಯವಾಗಿ ಬಿಂಬಿಸೋ ಮುಖಾಂತರ ವುಡ್ ವರ್ಡ್ಸ್ ಪಾರ್ಸೆಲ್ ಮಾಡಿದರು.‌
ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿಯಿಂದ ಕಣ್ಣೀರಧಾರೆ, ಮುಖ್ಯಮಂತ್ರಿಯಾದ ಮೇಲೂ ಮುಂದುವರಿಕೆ ಹಿನ್ನೆಲೆಯಲ್ಲಿ 
ನಿಪ್ಪಲ್ ಹಾಗೂ ವುಡ್ ವರ್ಡ್ಸ್ ಅನ್ನು ಕುಮಾರಸ್ವಾಮಿಗೆ ಪೋಸ್ಟ್ ಮೂಲಕ ರವಾನೆ ಮಾಡಿದರು.

ಕುಮಾರಸ್ವಾಮಿ ಸಿಎಂ ಆಗೋಕಿಂತ ಮೊದಲು ಸಿಎಂ ಮಾಡಿ ಅಂತ ಅಳ್ತಿದ್ರು. ಬಹುಮತ ಇಲ್ಲದಿದ್ದರೂ ಸಿಎಂ ಆಗಿರೋ ಕುಮಾರಸ್ವಾಮಿ ಈಗ ಏಕೆ ಅಳ್ತಿದ್ದಾರೆಂಬುದು ಅವ್ರ ಪಕ್ಷದ ಕಾರ್ಯಕರ್ತರಿಗೆ ಗೊಂದಲ ಉಂಟಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ