ಸತ್ಯ ಒಪ್ಪಿಕೊಂಡ ಡಿಕೆ ಶಿವಕುಮಾರ್, ಬಿಜೆಪಿ ವ್ಯಂಗ್ಯ
‘ಕಾಂಗ್ರೆಸ್ ನದ್ದು ಯಾವತ್ತೂ ವಿಭಜಿಸಿ ಆಳುವ ನೀತಿ. ಹಿಂದೂ ಸಮುದಾಯವನ್ನು ಒಡೆಯುವುದು ಕಾಂಗ್ರೆಸ್ ನ ನೀತಿ ಮತ್ತು ಸಿದ್ದರಾಮಯ್ಯ ಗಾಂಧಿ ಕುಟುಂಬಕ್ಕೋಸ್ಕರ ಈ ರೀತಿ ಮಾಡಿದ ಮತ್ತೊಬ್ಬ ಏಜೆಂಟ್. ಲಿಂಗಾಯತರನ್ನು ಹಿಂದೂಗಳಿಂದ ಬೇರ್ಪಡಿಸಿ ಧರ್ಮ ಒಡೆಯುವ ಕೆಲಸ ಮಾಡಿದ್ದನ್ನು ಕಾಂಗ್ರೆಸ್ ನ ಶಾಸಕರೇ ಒಪ್ಪಿಕೊಂಡಿದ್ದಾರೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ರಂಭಾಪುರಿ ಶ್ರೀಗಳ ಧರ್ಮಸಮ್ಮೇಳನದಲ್ಲಿ ಸಚಿವ ಡಿಕೆಶಿ ತಮ್ಮ ಹಿಂದಿನ ಸರ್ಕಾರ ಧರ್ಮದ ವಿಚಾರದಲ್ಲಿ ಮೂಗು ತೂರಿಸಿ ತಕ್ಕ ಪಾಠ ಕಲಿಯಿತು ಎಂದು ತಪ್ಪೊಪ್ಪಿಕೊಂಡಿದ್ದರು. ಅಲ್ಲದೆ, ತಮ್ಮ ಸರ್ಕಾರದ ತಪ್ಪಿಗೆ ಕ್ಷಮೆಯನ್ನೂ ಯಾಚಿಸಿದ್ದರು.