ನಾನು ಮಾತಾಡಿದ್ರೆ ಕಾಂಗ್ರೆಸ್ ಗೆ ವೋಟ್ ಸಿಗಲ್ಲ ಎಂದ ಹಿರಿಯ ನಾಯಕ ಯಾರು ಗೊತ್ತೇ?!

ಬುಧವಾರ, 17 ಅಕ್ಟೋಬರ್ 2018 (09:15 IST)
ನವದೆಹಲಿ: ನಾನೆಲ್ಲಾದ್ರೂ ಬಾಯ್ಬಿಟ್ಟರೆ ಕಾಂಗ್ರೆಸ್ ವೋಟ್ ಕಳೆದುಕೊಳ್ಳಬೇಕಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೊಂಡಿದ್ದಾರೆ.

‘ನಾನು ಸಾರ್ವನಿಕ ರ್ಯಾಲಿಯಲ್ಲಿ ಮಾತನಾಡಿದರೆ ಕಾಂಗ್ರೆಸ್ ಗೆ ಒಂದೇ ಒಂದು ವೋಟ್ ಸಿಗಲ್ಲ’ ಎಂದು ದಿಗ್ವಿಜಯ್ ಸಿಂಗ್ ನೀಡಿದ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ.

ದಿಗ್ವಿಜಯ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ‘ಕಾಂಗ್ರೆಸ್ ನಾಯಕರು ಕನಿಷ್ಠ ಪಕ್ಷ ತಮ್ಮ ನಾಯಕರನ್ನು ಗೌರವಿಸಲು ಕಲಿಯಬೇಕು. ಕಾಂಗ್ರೆಸ್ ನವರು ತಮ್ಮ ನಾಯಕನನ್ನು ಈ ಮಟ್ಟಿಗೆ ನಡೆಸಿಕೊಳ್ಳಬಹುದೆಂದು ನಾನು ಕಲ್ಪಿಸಿಯೂ ಇರಲಿಲ್ಲ’ ಎಂದು ಶಿವರಾಜ್ ಸಿಂಗ್ ಚೌಹಾಣ್ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ