ಮೋದಿ ಹವಾ, ಹಿಂದುತ್ವದ ಅಂಜೆಡಾದಿಂದ ಬಿಜೆಪಿ ಗೆಲುವು: ಮದ್ವರಾಜ್
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮೋದಿ ಹವಾ ಹಾಗೂ ಹಿಂದುತ್ವದ ಅಂಜೆಡಾದಿಂದ ಗೆಲುವು ಸಾಧಿಸಿದೆ ಎಂದು ಮಾಜಿ ಶಾಸಕ ಪ್ರಮೋದ್ ಮದ್ವರಾಜ್ ಆರೋಪ ಮಾಡಿದ್ದಾರೆ. ಉಡುಪಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ್ರು, ಕರಾವಳಿಯ ಹಾಲಿ ಶಾಸಕರು ಹಿಂದುತ್ವದ ಅಜೆಂಡಾವನ್ನು ಮುಂದಿಟ್ಟು, ಜನರ ಮತವನ್ನು ಪಡೆದುಕೊಂಡಿದ್ದಾರೆ. ಇದೀಗ ವಿಧಾನಸಭಾ ಮುಂದೆ ಕರಾವಳಿಗಾಗಿ ಬಜೆಟ್ನಲ್ಲಿ ಸಿ ಎಂ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ ಎಂದು ಪ್ರತಿಭಟನೆಗೆ ಕುಳಿತುಕೊಂಡಿದ್ದಾರೆ.