ಬೈಕ್ ಗೆ ಬಿಎಂಟಿಸಿ ಡಿಕ್ಕಿ -ವಾಹನ ಸವಾರ ಸ್ಥಳದಲ್ಲೇ ಸಾವು

ಭಾನುವಾರ, 29 ಅಕ್ಟೋಬರ್ 2023 (14:00 IST)
ಬೈಕ್ ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಾಪ್ಪಿದ್ದಾನೆ.ಕುಮಾರ್ ಮೃತ ವಾಹನ ಸವಾರನಾಗಿದ್ದು,ವಿಜಯನಗರ  ವಾಟರ್ ಟ್ಯಾಂಕ್ ಬಳಿ ನಡೆದ ಘಟನೆ ನಡೆದಿದೆ.
 
ಇಂದು ಬೆಳಗ್ಗೆ 7-30 ರ ಸಂದರ್ಭದಲ್ಲಿ  ಅಪಘಾತ  ನಡೆದಿದ್ದು,ವಿಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಪತ್ನಿಯ ಸೀಮಂತ ಇದ್ದ ಕಾರಣ ಹೂ ತರಲು ಕುಮಾರ್ ಬಂದಿದ್ದ. ಈ ವೇಳೆ ಬಿಎಂಟಿಸಿ ಬಸ್ ಓವರ್ ಟೇಕ್  ಮಾಡುವ ವೇಳೆ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ಕಾರಣ ಕುಮಾರ್ ಸ್ಥಳದಲ್ಲೇ ಸಾವನಾಪ್ಪಿದ್ದು,ಕುಮಾರ್ ಅನ್ನಪೂರ್ಣೇಶ್ವರಿ ನಗರ ನಿವಾಸಿಯಾಗಿದ್ದ.ಸದ್ಯ ಕುಮಾರ್ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು,ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ