ಆಸ್ತಿ ವಿವರ ಮರೆಮಾಚಿದ್ದಾರೆಂದು ಬೊಮ್ಮನಹಳ್ಳಿ ಬಿಜೆಪಿ ಅಭ್ಯರ್ಥಿ ವಿರುದ್ಧ ಆರೋಪ

ಭಾನುವಾರ, 23 ಏಪ್ರಿಲ್ 2023 (16:48 IST)
ಬೊಮ್ಮನಹಳ್ಳಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ವಿರುದ್ಧ ಆಸ್ತಿ ಆರೋಪ ಕೇಳಿಬಂದಿದೆ.ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ಆರೋಪ ಮಾಡಿದ್ದು,ಪತ್ನಿ ಹೆಸರಿನಲ್ಲಿರಿವ RAA ಡೆವಲಪರ್ಸ್ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡಿ ಮರೆಮಾಚಿದ್ದಾರೆ.ಸತೀಶ್ ರೆಡ್ಡಿ ಪತ್ನಿ ಆಶಾ ಸತೀಶ್ ಹೂಡಿಕೆ ಮಾಡಿದ್ದು,ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸದ ಅಫಿಡವಿಟ್ ನಲ್ಲಿ ಉಲ್ಲೆಖವಿಲ್ಲ.RAA ಡೆವಲರ್ಸ್ ಸಂಸ್ಥೆ ಪಾಲುದಾರರಲ್ಲಿ ಆಶಾ ಸತೀಶ್ ಒಬ್ಬರಾಗಿದ್ದು,ಆದರೂ ನಾಮಪತ್ರ  ಜೊತೆ ಸಲ್ಲಿಕೆಯಾದ ಅಪಿಡವಿಟ್ ನಲ್ಲಿ ಮರೆ ಮಾಚಿದ ಆರೋಪ ಕೇಳಿಬಂದಿದೆ.ಹಾಗಾಗಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ನಾಮಪತ್ರ ತಿರಸ್ಕರಿಸಲು ಆಕ್ಷೇಪಣೆ ಸಲ್ಲಿಸಿದ್ದಾರೆ.
 
ಆಕ್ಷೇಪಣೆ ನಡುವೆಯು ನಾಮಪತ್ರ ಅಂಗೀಕಾರವಾಗಿದ್ದು,ಚುನಾವಣಾ ಅಧಿಕಾರಿಯಿಂದ ನಾಮಪತ್ರ ಅಂಗೀಕಾರವಾಗಿದೆ.ನಾಮಪತ್ರ ಅಂಗೀಕಾರ ಹಿನ್ನೆಲೆ ನ್ಯಾಯಾಲಯದ ಮೊರೆ ಹೋಗಲು ನಿರ್ಧಾರ ಮಾಡಿದ್ದು,ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ನ್ಯಾಯಾಲಯದಲ್ಲಿ ಹೋರಾಟ ನಡೆಸಲಿದ್ದಾರೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಇದೀಗ  ಜಿದ್ದಾಜಿದ್ದಿನ ಅಖಾಡವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ