ಸಹೋದರರ ಭೀಕರ ಹತ್ಯೆ: ಬೆಚ್ಚಿದ ಗುಂಬಜ ನಗರಿ

ಶನಿವಾರ, 23 ಫೆಬ್ರವರಿ 2019 (13:01 IST)
ಗುಮ್ಮಟ ನಗರಿಯಲ್ಲಿ ಸಹೋದರರಿಬ್ಬರ ಭೀಕರ ಹತ್ಯೆ ನಡೆದಿದೆ. ಮಹಾನಗರದ ಜನರು ಆತಂಕದಲ್ಲಿದ್ದಾರೆ.

ವಿಜಯಪುರ ನಗರದಲ್ಲಿ ಸಹೋದರರಿಬ್ಬರ ಕೊಲೆ ಮಾಡಲಾಗಿದೆ. ಸರಕಾರಿ ಹೈಸ್ಕೂಲ್ ಆವರಣದಲ್ಲಿ ರಜಾಕ ಕೋಚಮ್ಯಾನ್ (32) ಎಂಬಾತನನ್ನು ಕತ್ತು ಸೀಳಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

ಇನ್ನು ರಾಜಕನ ಸಹೋದರ ಸಲೀಂ ಕೋಚಮ್ಯಾನ್ ನನ್ನು ಜಯ ಕರ್ನಾಟಕ ನಗರದಲ್ಲಿ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಲಾಗಿದೆ. ಈ ಜೋಡಿಗಳ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಗಾಂಧಿಚೌಕ ಹಾಗೂ ಗೋಲಗುಮ್ಮಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊಲೆಗಾರರ ಬಂಧನಕ್ಕೆ ಬಲೆ ಬೀಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ