ಚುನಾವಣೆಗಾಗಿ ಹೊಸ ಮನೆ ಮಾಡಿಕೊಂಡ ಬಿಎಸ್ ವೈ ಪುತ್ರ!

ಶುಕ್ರವಾರ, 13 ಏಪ್ರಿಲ್ 2018 (10:56 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ವಿರುದ್ಧ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಇಲ್ಲಿ ಹೊಸ ಮನೆ ಮಾಡಿಕೊಂಡಿದ್ದಾರೆ.

ಚುನಾವಣೆ ಓಡಾಟಕ್ಕಾಗಿ ಇಲ್ಲಿ ಹೊಸ ಮನೆ ಬಾಡಿಗೆಗೆ ಪಡೆದಿರುವ ವಿಜಯೇಂದ್ರ ಇಂದು ಗೃಹ ಪ್ರವೇಶ ಮಾಡಿದ್ದಾರೆ. ಪತ್ನಿ ಪ್ರೇಮ ಸಮೇತರಾಗಿ ಪೂಜೆ, ಹವನ ನೆರವೇರಿಸಿ ಹೊಸ ಮನೆ ಪ್ರವೇಶಿಸಿದ್ದಾರೆ.

ಈ ಸಂದರ್ಭದಲ್ಲಿ ಹಲವಾರು ಬಿಜೆಪಿ ಕಾರ್ಯಕರ್ತರೂ ಭಾಗವಹಿಸಿದ್ದಾರೆ. ಚುನಾವಣೆ ಓಡಾಟಕ್ಕೆ ಅನುಕೂಲವಾಗಲೆಂಬ ದೃಷ್ಟಿಯಿಂದ ವಿಜಯೇಂದ್ರ ಹೊಸ ಮನೆಯನ್ನು ಬಾಡಿಗೆಗೆ ಪಡೆದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ