ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ; ಮಾಜಿ ಶಾಸಕ ಯು.ಬಿ.ಬಣಕಾರ್ ಸ್ಪರ್ಧೆ ಮಾಡುವುದು ಖಚಿತ

ಸೋಮವಾರ, 4 ನವೆಂಬರ್ 2019 (10:55 IST)
ಹಿರೇಕೆರೂರು :ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವಿಚಾರ ಮಾಜಿ ಶಾಸಕ ಯು.ಬಿ.ಬಣಕಾರ್ ಸ್ಪರ್ಧೆ ಮಾಡುವುದು ಖಚಿತ ಎಂಬ ಮಾತು ಕೇಳಿಬಂದಿದೆ.




ಯು.ಬಿ.ಬಣಕಾರ್ ಕಾರ್ಯಕರ್ತನ ಜೊತೆ ಮಾತನಾಡುವಾಗ, ಸುಪ್ರೀಂಕೋರ್ಟ್ ಆದೇಶಕ್ಕಾಗಿ ನಾನು ಈಗ ಕಾಯುತ್ತಿದ್ದೇನೆ. ನಾನು ಬಿಜೆಪಿಯಲ್ಲಿದ್ದೇನೆ. ನಿಗಮ ಮಂಡಳಿ ಸಹ ಕೊಟ್ಟಿದ್ದಾರೆ. ನನ್ನ ಷರತ್ತು ಉಲ್ಲಂಘಿಸಿದರೆ ನಾನು ರಾಜೀನಾಮೆ ನೀಡುತ್ತೇನೆ. ಬಿ.ಸಿ. ಪಾಟೀಲ್ ಅನರ್ಹರಾದ್ರೆ ಯಾರನ್ನೂ ಕೇರ್ ಮಾಡಲ್ಲ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ  ನೀಡುತ್ತೇನೆ ಎಂದು ಹೇಳಿದ್ದರು. 


ಇದೀಗ ಕಾರ್ಯಕರ್ತನ ಜೊತೆ ಅವರು ಮಾತನಾಡಿದ ಆಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಯು.ಬಿ.ಬಣಕಾರ್ ಸ್ಪರ್ಧೆ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ