'ನಿನ್ನನ್ನು ಬಿಟ್ಟು ಬದುಕಲಾರೆ': ಹುಂಡಿ ಎಣಿಕೆ ವೇಳೆ ಲವ್‌ ಲೆಟರ್ ಪತ್ತೆ

Sampriya

ಮಂಗಳವಾರ, 30 ಜುಲೈ 2024 (18:02 IST)
Photo Courtesy X
ಕೋಲಾರ: ಇಲ್ಲಿನ ಚಿಕ್ಕತಿರುಪತಿ ಶ್ರೀ ಪ್ರಸನ್ನ ವೆಂಕಟೇಶ್ವರ ದೇವಾಲಯದ ಹುಂಡಿಯ ಎಣಿಕೆ ಕಾರ್ಯ ವೇಳೆ ಹಣದ ಜತೆಗೆ ಲವ್‌ ಲೆಟರ್ ಪತ್ತೆಯಾಗಿದೆ.

ದೇವಾಲಯದಲ್ಲಿ ಪ್ರತಿಮೂರು ತಿಂಗಳಿಗೊಮ್ಮೆ ನಡೆಯುವ ಹುಂಡಿ ಎಣಿಕೆ ಕಾರ್ಯದಲ್ಲಿ ಚಿನ್ನ ಬೆಳ್ಳಿ ಸಹಿತ ಭಕ್ತರು ಲಕ್ಷಾಂತರು ದೇಣಿಗೆ ನೀಡುತ್ತಾರೆ. ಆದರೆ ಈ ಬಾರಿ ಹುಡುಗಿಯೊಬ್ಬಳು ಪ್ರಿಯಕರ ಕೃಷ್ಣನಿಗೆ ಲವ್‌ ಲೆಟರ್‌ ಅನ್ನು ಬರೆದು ಹಾಕಿದ್ದಾಳೆ. ಇದನ್ನು ನೋಡಿದ ಸಿಬ್ಬಂದಿ ಅಚ್ಚರಿಗೆ ಒಳಗಾಗಿದ್ದಾರೆ.

ಲವ್‌ ಲೆಟರ್‌ನಲ್ಲಿ ಏನಿದೆ: 'ಪ್ರಿಯಕರ ಕೃಷ್ಣನಿಗೆ ಐ ಲವ್' ಎಂದು ಬರೆದಿರುವ ಪ್ರಿಯತಮೆ. ಬೆಳಗಾವಿ ಮೂಲದ ಪ್ರಿಯತಮೆ  ಹೆಸರಲ್ಲಿ ಬರೆದಿರುವ ಲವ್ ಲೆಟರ್, 'ನಿನ್ನನ್ನು ಬಿಟ್ಟು ನಾನು ಬದುಕಲಾರೆ. ನಾನು ಕಣ್ಣು ಮುಚ್ಚಿದರೂ, ಕಣ್ಣುಬಿಟ್ಟರೂ ನೀನೇ ಕಾಣಿಸುತ್ತೀಯಾ, ನಿನ್ನನ್ನು ನನ್ನಷ್ಟು ಪ್ರೀತಿ ಮಾಡುವವಳು ಈ ಜಗತ್ತಿನಲ್ಲಿ ಯಾರೂ ಇಲ್ಲ..' ಎಂದು ಲೆಟರ್‌ನಲ್ಲಿ ಆಕೆ ಬರೆದಿದ್ದಾಳೆ.

ಎಣಿಕೆ ಕಾರ್ಯದಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಖಾಸಗಿ ಶಾಲಾ ವಿದ್ಯಾರ್ಥಿಗಳಿಂದ  ಭಾಗಿಯಾಗಿದ್ದರು.  ಈ ವೇಳೆ ತಹಶೀಲ್ದಾರ್ ರಮೇಶ್,  ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸೆಲ್ವಮಣಿ ಭಾಗಿಯಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ