ಚಂದನ್ – ನಿವೇದಿತಾರನ್ನ ಅಭಿನಂದಿಸಿದ ಪ್ರತಾಪ ಸಿಂಹ

ಶನಿವಾರ, 5 ಅಕ್ಟೋಬರ್ 2019 (18:32 IST)

ಮೈಸೂರು ಸಂಸದ ಪ್ರತಾಪ ಸಿಂಹ ಅವರು ಚಂದನ್ ಶೆಟ್ಟಿ ಹಾಗೂ ನಿವೇದಿತಾರನ್ನ ಅಭಿನಂದಿಸಿದ್ದಾರೆ.

ಯುವ ದಸರಾ ಸಮಾರಂಭದಲ್ಲಿ ಕಾರ್ಯಕ್ರಮ ನೀಡುತ್ತಿದ್ದ ವೇಳೆಯಲ್ಲೇ ಚಂದನ್ ನಿವೇದಿತಾಗೆ ಪ್ರಪೋಸ್ ಮಾಡಿ ರಿಂಗ್ ತೊಡಿಸಿದ್ದರು. ಈ ವಿಷಯಕ್ಕೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರೂ ಕೆಲವು ಜನರು, ಸರಕಾರಿ ಕಾರ್ಯಕ್ರಮದಲ್ಲಿ ಈ ರೀತಿ ಮಾಡಿರೋದು ಸರಿಯಲ್ಲ ಅಂತೆಲ್ಲ ಜರಿದಿದ್ದರು.

ಇದಕ್ಕೆ ಟ್ವೀಟ್ ಮಾಡಿರೋ ಸಂಸದ ಪ್ರತಾಪ ಸಿಂಹ, ಯುವ ದಸರಾದಲ್ಲಿ 2 ಗಂಟೆ ಮೈಸೂರಿಗರ ಮನಸ್ಸಿಗೆ ಮುದ ಕೊಟ್ಟು 2 ಸೆಕೆಂಡ್ ಪ್ರೇಮ ನಿವೇದನೆ ಮಾಡಿಕೊಂಡ ಚಂದನ್ ಶೆಟ್ಟಿಯವರನ್ನು ಏನೋ ಮಹಾಪರಾಧ ಮಾಡಿದವನಂತೆ ಕಾಣುವುದು ಸಾಕು. ಇಬ್ಬರಿಗೂ ಒಳ್ಳೆಯದಾಗಲಿ ಅಂತ ಬರೆದು, ಶುಭ ಹಾರೈಕೆ ಮಾಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ