ನಗರ ಸಾರಿಗೆ ಬಸ್ ಸೀಜ್: ಕೋರ್ಟ್ ಆದೇಶ

ಗುರುವಾರ, 5 ಜುಲೈ 2018 (18:17 IST)
ಅಪಘಾತ ಪರಿಹಾರ ವಿಳಂಬಕ್ಕಾಗಿ ನಗರಸಾರಿಗೆ ಬಸ್ ನ್ನು ಸೀಜ್ ಮಾಡುವಂತೆ ಕೋರ್ಟ್ ಆದೇಶ ಹೊರಡಿಸಿದೆ. 
 
ಚಿತ್ರದುರ್ಗದ ಒಂದನೇ ಹೆಚ್ಚುವರಿ ಹಿರಿಯ ವಿಭಾಗ ನ್ಯಾಯಾಲಯ ಈ ಆದೇಶ ನೀಡಿದೆ. ಜಿಲ್ಲೆಯ ತಾ.ನ.ಕೊಳಹಾಳ್ ಗ್ರಾಮದ ಹತ್ತಿರ 2016ರಲ್ಲಿ ಅಪಘಾತ ನಡೆದಿತ್ತು. ಆ ಅಪಘಾತದಲ್ಲಿ 12 ವರ್ಷದ ಅಭಿಷೇಕ್ ಸಾವನ್ನಪ್ಪಿದ್ದನು. 
 
ಭರಮಸಾಗರ ಹೋಬಳಿ ಕೊಳಹಾಳ್ ಗ್ರಾಮದ ನಿವಾಸಿ ಸರೋಜಮ್ಮನ ಪುತ್ರ ಅಭಿಷೇಕ್ ಸಾವನ್ನಪ್ಪಿದ್ದನು. ಈ ಕುರಿತು ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪರಿಹಾರ ವಿಳಂಬಕ್ಕಾಗಿ ಕನ್ನಡ ಖ್ಯಾತಿಯ ಕೆಎ 42, ಎಫ್ 1899 ನೋಂದಣಿಯ ನಗರ ಸಾರಿಗೆ ಬಸ್ ಸೀಜ್ ಮಾಡುವಂತೆ ಕೋರ್ಟ್ ಆದೇಶ ಹೊರಡಿಸಿದೆ. 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ