ಯಲಹಂಕದ ಸಿಂಗನಾಯಕನಹಳ್ಳಿಯ ರಮಡ ರೆಸಾರ್ಟ್ ನಲ್ಲಿ ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಬೆಂಗಳೂರಿನ ಅನೇಕ ಸಾಫ್ಟ್ವೇರ್ ದಿಗ್ಗಜರು, ಮೋಹನ್ ದಾಸ್ ಪೈ ಅವರು ಮತ್ತು ಅನೇಕ ಕಂಪನಿಗಳು ಬೆಂಗಳೂರಿನ ರಸ್ತೆಯ ಗುಂಡಿಗಳ ತೊಂದರೆಯ ಬಗ್ಗೆ ಮಾತನಾಡಿದಾಗ ಅವರನ್ನು ಕರೆಸಿ ಸಮಸ್ಯೆಗಳಿಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಬೇಕಿತ್ತು. ಆದರೆ ಅವರ ಜೊತೆ ಮಾತನಾಡದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆ ಇಡೀ ಸಾಫ್ಟ್ವೇರ್ ಕಂಪನಿಗಳಿಗೆ ಬಹಳಷ್ಟು ನೋವನ್ನು ಉಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಇಂದು ಬೆಂಗಳೂರಿನ ಎಲ್ಲ ರಿಂಗ್ ರಸ್ತೆಗಳು, ಬೇರೆ ಬೇರೆ ರಸ್ತೆಗಳು ಗುಂಡಿ ಬಿದ್ದು ಅವ್ಯವಸ್ಥೆಯಾಗಿದೆ. ಸರ್ಕಾರದಿಂದ ರಸ್ತೆ ಅಭಿವೃದ್ಧಿಗೆ 25 ಅಥವಾ 50 ಕೋಟಿ ಹಣ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ರಸ್ತೆ ಸರಿಪಡಿಸಲು ಒಂದೂ ಟೆಂಡರ್ ಕರೆದಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಬಂದು ಎರಡೂವರೆ ವರ್ಷವಾಗಿದೆ. ಈ ಹಿಂದೆ ಮಳೆಯಿಂದ ಸಮಸ್ಯೆಗಳಾಗಿದ್ದು, ಒಂದು ವರ್ಷದಲ್ಲಿ ಯಾವ ಕ್ರಮವನ್ನು ತೆಗೆದುಕೊಂಡಿಲ್ಲ ಮತ್ತು ರಸ್ತೆಗಳಿಗೂ ಡಾಂಬರಿಕರಣ ಆಗಿರುವುದಿಲ್ಲ ಎಂದು ಆರೋಪಿಸಿದರು. ಸರ್ಕಾರ ಎರಡೂವರೆ ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಬೆಂಗಳೂರು 10 ವರ್ಷಗಳ ಹಿಂದಕ್ಕೆ ಹೋಗುವ ಕೆಲಸವನ್ನು ಡಿ.ಕೆ. ಶಿವಕುಮಾರ್ ಅವರು ಮಾಡಿದ್ದಾರೆ ಎಂದು ದೂರಿದರು.