1ರಿಂದ 5ನೇ ತರಗತಿ: ತಜ್ಞರ ಸಲಹೆ ನಂತರವೇ ಕ್ರಮ ಎಂದ ಸಚಿವ ನಾಗೇಶ

ಶನಿವಾರ, 18 ಸೆಪ್ಟಂಬರ್ 2021 (08:10 IST)
ಯಾದಗಿರಿ : 'ವಿಧಾನ ಮಂಡಲ ಅಧಿವೇಶನದ ಬಳಿಕ ತಜ್ಞರ ಸಲಹೆ ಪಡೆದು, 1ರಿಂದ 5ನೇ ತರಗತಿ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಸಣ್ಣ ಮಕ್ಕಳು ಕೋವಿಡ್ ನಿಯಮ ಪಾಲಿಸುವುದು ಕಷ್ಟ. ಹೀಗಾಗಿ ಈ ವಿಷಯದಲ್ಲಿ ಸರ್ಕಾರ ಯಾವುದೇ ಅವಸರದ ಕ್ರಮ ಕೈಗೊಳ್ಳುವುದಿಲ್ಲ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು.

'6ನೇ ತರಗತಿಯಿಂದ ಪಿಯು ವರೆಗೆ ಭೌತಿಕ ತರಗತಿ ನಡೆಯುತ್ತಿವೆ. ವಿದ್ಯಾರ್ಥಿಗಳು ಶಾಲೆಗೆ ನಡೆದುಕೊಂಡು ಹೋಗುತ್ತಿ ರುವುದು ಕಂಡು ಬರುತ್ತಿದೆ. ಹಳೆ ಪಾಸ್ ತೋರಿಸಿದರೆ ಬಸ್ನಲ್ಲಿ ಪ್ರಯಾಣ ಮಾಡ ಬಹುದು' ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
'ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಕೆಎಟಿ ತಡೆಯಾಜ್ಞೆ ನೀಡಿದೆ. ಹೀಗಾಗಿ ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ' ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ