ಕ್ಯಾನ್ಸರ್ ಪೀಡಿತೆಯ ನೆರವಿಗೆ ಬಂದ ಸಿಎಂ ಬಿಎಸ್ ವೈ

ಸೋಮವಾರ, 13 ಏಪ್ರಿಲ್ 2020 (10:16 IST)

ಧಾರವಾಡ : ಲಾಕ್ ಡೌನ್ ಹಿನ್ನಲೆ ಚಿಕಿತ್ಸೆ ಪಡೆಯಲಾಗದೆ ಪರದಾಡುತ್ತಾ ಸಂಕಷ್ಟದಲ್ಲಿದ್ದ ಕುಟುಂಬವೊಂದಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ನೆರವು ನೀಡಿದ್ದಾರೆ. 

 

ರಾಯಬಾಗ ತಾಲೂಕಿನ ಶಿರಗೂರು ಗ್ರಾಮದ ಕಮಲವ್ವ ಎಂಬುವವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಅವರಿಗೆ ತಕ್ಷಣ ಚಿಕಿತ್ಸೆ ನೀಡಬೇಕಾಗಿತ್ತು. ಆದರೆ ಲಾಕ್ ಡೌನ್ ಹಿನ್ನಲೆಯಲ್ಲಿ ಮನೆಯಿಂದ ಹೊರಗೆ ಬರಲಾಗದೆ ಒದ್ದಾಡುತ್ತಿದ್ದ ಕಮಲವ್ವ  ನೆರವಿಗೆ  ಇದೀಗ ಸಿಎಂ ಬಿಎಸ್ ವೈ ಬಂದಿದ್ದಾರೆ.

 

ಧಾರವಾಡದ ಡಿಹೆಚ್ ಓಗೆ ಚಿಕಿತ್ಸೆ ನೀಡಲು ಸಿಎಂ ಸೂಚಿಸಿದ್ದಾರೆ. ಆದಕಾರಣ ಇಂದು ಧಾರವಾಡದ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಮಲವ್ವಗೆ ಚಿಕಿತ್ಸೆ ನೀಡಲಾಗುತ್ತಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ