ಸಿದ್ಧರಾಮಯ್ಯ ತಲಾಖ್ ರಾಜಕಾರಣಿ: ಕೆಎಸ್ ಈಶ್ವರಪ್ಪ

ಮಂಗಳವಾರ, 4 ಏಪ್ರಿಲ್ 2017 (10:40 IST)
ಬೆಂಗಳೂರು: ನನ್ನ ಬಗ್ಗೆ ಟೀಕೆ ಮಾಡುವ ಅಧಿಕಾರ ಸಿಎಂ ಸಿದ್ಧರಾಮಯ್ಯ ಅವರಿಗಿಲ್ಲ. ಅವರೊಬ್ಬ ತಲಾಖ್ ರಾಜಕಾರಣಿ. ಜೆಡಿಎಸ್ ಗೆ ತಲಾಖ್ ನೀಡಿ ಕಾಂಗ್ರೆಸ್ ಸೇರಿಕೊಂಡವರು ಎಂದು ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

 

ನಿನ್ನೆಯಷ್ಟೇ ಸಿಎಂ ಸಿದ್ಧರಾಮಯ್ಯ ಈಶ್ವರಪ್ಪ ಬಗ್ಗೆ  ಏಕವಚನದಲ್ಲಿ ನಿಂದಿಸಿದ್ದರು. ಇಂದು ಸಿಎಂಗೆ ತಿರುಗೇಟು ನೀಡಿದ ಈಶ್ವರಪ್ಪ, ನಾನು ತಾಯಿ ಮೊಲೆ ಹಾಲು ಕುಡಿದವ. ನನ್ನ ಪಕ್ಷ ನಿಷ್ಠೆ ಬಗ್ಗೆ ಮಾತನಾಡುವ ನೈತಿಕತೆ ಸಿಎಂಗಿಲ್ಲ. ಅವರು ಜೆಡಿಎಸ್ ಗೆ ತಲಾಖ್ ನೀಡಿ ಬಂದವರು. ಕಾಂಗ್ರೆಸ್ ಗೂ ಸಿಎಂ ಪಟ್ಟ ಕಳೆದುಕೊಂಡರೆ ತಲಾಖ್ ನೀಡಲು ಸಿದ್ಧರಾಗಿರುವವರು ಎಂದು ಲೇವಡಿ ಮಾಡಿದ್ದಾರೆ.

 
ಅಧಿಕಾರ ಸಿಗಲಿಲ್ಲ ಎಂದರೆ ಪಕ್ಷಾಂತರ ಮಾಡುವ ರಾಜಕಾರಣಿ ಎಂದು ಈಶ್ವರಪ್ಪ ಜರೆದಿದ್ದಾರೆ. ಉಪಚುನಾವಣೆ  ಹಿನ್ನಲೆಯಲ್ಲಿ ಉಭಯ ನಾಯಕರ ನಡುವೆ ಮಾತಿನ ಚಕಮಕಿ ಜೋರಾಗಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ