ಹೂ ಮಾರುವ ಬಾಲಕಿಯ ನೆರವಿಗೆ ಮುಂದಾದ ಸಿಎಂ

ಗುರುವಾರ, 27 ಸೆಪ್ಟಂಬರ್ 2018 (17:29 IST)
ಮಾರ್ಗ ಮಧ್ಯೆ ಕಾರು ನಿಲ್ಲಿಸಿ ರಸ್ತೆ ಬದಿ ಹೂ ಮಾರುತ್ತಿದ್ದ ಪುಟ್ಟ ಬಾಲಕಿಯನ್ನು ಮಾತನಾಡಿಸಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೊಟ್ಟ ಭರವಸೆಯಂತೆ ಬಾಲಕಿಯ ನೆರವಿಗೆ ಮುಂದಾಗಿದ್ದಾರೆ.

ಮಂಡ್ಯ ಜಿಲ್ಲಾ ಅಭಿವೃದ್ಧಿ ವಿಚಾರವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಮಂಡ್ಯಕ್ಕೆ ಆಗಮಿಸಿದ್ದ ಸಿಎಂ ಹೆಚ್ಡಿಕೆ, ಕೆಲಹೊತ್ತು ಸಾರ್ವಜನಿಕರ ಕುಂದು ಕೊರತೆ ಆಲಿಸಿದರು. ಜನರ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಾಲಕಿ ಶಬಾಬ್ ತಾಜ್ ಳನ್ನು ತನ್ನ ಬಳಿ ಕರೆಸಿಕೊಂಡು ಯೋಗಕ್ಷೇಮ ವಿಚಾರಿಸಿದ ಸಿಎಂ, ಬಾಲಕಿಯ ವಿದ್ಯಾಭ್ಯಾಸದ ಸಂಪೂರ್ಣ ಜವಬ್ದಾರಿ ಹೊರುವುದಾಗಿ ಹೇಳಿದರು. ಆಕೆಯ ಕುಟುಂಬಕ್ಕೆ ನಿವೇಶನ ನೀಡೋದರ ಜೊತೆಗೆ ಆರ್ಥಿವಾಗಿ ನೆರವು ನೀಡುವ ಭರವಸೆ ನೀಡಿದ್ದಾರೆ.

ಇನ್ನೂ ಸಿಎಂ ಕುಮಾರಸ್ವಾಮಿ ಮಾತುಗಳಿಂದ ಸಂತಸಗೊಂಡಿರುವ ಬಾಲಕಿ ಶಬಾಬ್ ತಾಯಿ ಮಸೂದ ಬಾನು, ಸಿಎಂ‌ ಅವ್ರು ನಮಗೆ ಮನೆ ನೀಡುವ ಭರವಸೆ ನೀಡಿದ್ದು ಖುಷಿ ತಂದಿದೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ