ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ನಿಯೋಗದಿಂದ ದೂರು

ಮಂಗಳವಾರ, 9 ಮೇ 2023 (14:02 IST)
ಲೋಕಾಯುಕ್ತಕ್ಕೆ ಕಾಂಗ್ರೆಸ್ ನಿಯೋಗದ ವಕ್ತಾರರಾದ ರಮೇಶ್ ಬಾಬು ಕಂಪ್ಲೇಂಟ್ ನೀಡಿದ್ದಾರೆ.
 
ಈ ವೇಳೆ ಮಾತನಾಡಿದ ರಮೇಶ್ ಬಾಬು ಬಿಜೆಪಿಗೆ ಕೊನೆಯ ಮೊಳೆ ಹೊಡೆಯುವ ಮೊಳೆ .ಆರೋಗ್ಯ ಇಲಾಖೆಯಲ್ಲಿ 1260 ಕೋಟಿ ಹಗರಣ ಆಗಿದೆ.ಅದಕ್ಕೆ ಸಂಬಂಧಿಸಿದಂತೆ ದೂರು ಕೊಟ್ಟಿದ್ದೇವೆ.ಒಬ್ಬ ಮಂತ್ರಿಯ ಪರವಾಗಿ ಸರ್ಕಾರಿ ಅಧಿಕಾರಿ ನಾರಾಯಣ್ ಅನ್ನೋ ವ್ಯಕ್ತಿ.ಹತ್ತು ಕೋಟಿಗಿಂತ ಹೆಚ್ಚು ಮೌಲ್ಯದ ಟೆಂಡರ್ ಕ್ಯಾಬಿನೆಟ್ ಮುಂದೆ ಬರಬೇಕು.ಇದರಲ್ಲಿ ಸಆರೋಗ್ಯ ಸಚಿವರು ಭಾಗಿಯಾಗಿದ್ದಾರೆ.ಆ್ಯಂಬ್ಯುಲೆನ್ಸ್ ಗೆ ಜಿಪಿಎಸ್ ಅಳವಡಿಸಲು ಟೆ‌ಂಡರ್ ಕೊಟ್ಟಿದ್ದು,ಹೈಕೋರ್ಟ್ ಆರ್ಡರ್ ಬಳಸಿಕೊಂಡು ಮಾಡಿದ್ದಾರೆ.ಅನರ್ಹ ಸಂಸ್ಥೆಗೆ ಟೆಂಡರ್ ಕೊಟ್ಟಿದ್ದಾರೆ.ನಿಯಮಾವಳಿ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
 
ಅಲ್ಲದೆ ರಮೇಶ್ ಬಾಬು ಕಮಿಷನ್ ಪಡೆದುಕೊಂಡು ಟೆಂಡರ್ ಕೊಟ್ಟಿದ್ದಾರೆ.ಈ ಬಗ್ಗೆ ಸಮಗ್ರ ತನಿಖೆ ಆಗಬೇಕು.ನ್ಯಾಶನಲ್ ಹೆಲ್ತ್ ಮಿಶನ್ ಅಧಿಕಾರಿ ನಾರಾಯಣ ಒಂದು ಕೋಟಿ ಕ್ಯಾಶ್ ಪಡೆದುಕೊಂಡಿದ್ದಾರೆ.ಯಾರು ಫಲಾನುಭವಿಗಳು ಇರ್ತಾರೋ ಅವ್ರೇ ಹಣ ಕೊಟ್ಟಿದ್ದಾರೆ. ಎಜುಸ್ಪಾರ್ಕ್ ಅಂಡ್ ಮಗೇನ್ ಡೇವಿಡ್ ಆಡಮ್ ಸಂಸ್ಥೆಗೆ ಗುತ್ತಿಗೆ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ