ಬಸ್‌ನಲ್ಲೇ ನೇಣು ಬಿಗಿದುಕೊಂಡ ಬಸ್ ಕಂಡಕ್ಟರ್

ಬುಧವಾರ, 5 ಅಕ್ಟೋಬರ್ 2016 (11:29 IST)
ಕೆಎಸ್‌ಆರ್‌ಟಿಸಿ ನಿರ್ವಾಹಕನೊಬ್ಬ ಬಸ್‌ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರ್ಗಿಯ ಚಿಂಚೊಳ್ಳಿ ಬಸ್ ಘಟಕದಲ್ಲಿ ಮಂಗಳವಾರ ನಡೆದಿದೆ.

ಈರಣ್ಣ ಆತ್ಮಹತ್ಯೆಗೆ ಶರಣಾದ ಬಸ್ ಕಂಡಕ್ಟರ್. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ಡಿಪೋದಲ್ಲಿ ನಿಲ್ಲಿಸಲಾಗಿದ್ದ ಬಸ್ ನಲ್ಲಿ ಈರಣ್ಣ (35) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.
 
ಮೃತನನ್ನು ಈರಣ್ಣ ಎಂದು ಗುರುತಿಸಲಾಗಿದ್ದು ಈತ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮೀನಕೆರಾ ಗ್ರಾಮದ ನಿವಾಸಿಯಾಗಿದ್ದಾನೆ.ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬೀದರ್ ಡಿಪೋದಲ್ಲಿ ಈತ ಸಾವಿಗೆ ಶರಣಾಗಿದ್ದಾನೆ
 
ನಿನ್ನೆ ಬೀದರ್‌ನಿಂದ ಚಿಂಚೋಳಿಗೆ ಹೋಗುತ್ತಿದ್ದ ಕೆಎ-38, ಎಫ್-827 ಸಂಖ್ಯೆಯ ಬಸ್‌ಗೆ ಈರಣ್ಣ ನಿರ್ವಾಹಕರಾಗಿದ್ದರು. ಬಸ್ ತಪಾಸಣೆಗೆ ಬಂದ ಸಂಚಾರಿ ನಿರೀಕ್ಷಕರು ಬಸ್‌ನಲ್ಲಿ ಇಬ್ಬರು ಪ್ರಯಾಣಿಕರ ಬಳಿ ಟಿಕೆಟ್ ಇಲ್ಲದಿದ್ದುದಕ್ಕೆ ಈರಣ್ಣನಿಗೆ ದಂಡ ವಿಧಿಸಿ ಅಮಾನತು ಮಾಡಿದ್ದರು.
 
ಇದರಿಂದ ಮನನೊಂದಿದ್ದ ಈರಣ್ಣ ನಿನ್ನೆ ರಾತ್ರಿ ಬಸ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
 
ಚಿಂಚೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವೆಬ್ದುನಿಯಾವನ್ನು ಓದಿ